ನಕ್ಸಲ್ ಪೀಡಿತರಿಗೆ ರಾಹುಲ್ ಗಾಂಧಿ ಸಾಂತ್ವನ
ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅತ್ಮಾಹುತಿ ದಾಳಿಯಲ್ಲಿ ನಾನು ತಂದೆಯನ್ನು ಕಳೆದುಕೊಂಡಿದ್ದೇನೆ. ತಂದೆಯನ್ನು ಕಳೆದುಕೊಂಡ ನೋವನ್ನೂ ಅನುಭವಿಸಿದ್ದೇನೆ. ಯಾವ ಕಾರಣಕ್ಕೂ ಭಯಪಡಬೇಡಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಇನ್ಸ್ ಪೆಕ್ಟರ್ ಕುಟುಂಬಕ್ಕೆ ಸಾಂತ್ವನ ಹೇಳಿದರು. ರಾಹುಲ್ ಗಾಂಧಿ ಸುಮಾರು 20 ನಿಮಿಷ ಅವರ ಮನೆಯಲ್ಲಿ ಕಳೆದರು.
ಮಾವೋವಾದಿ ಉಗ್ರಗಾಮಿಗಳ ಉಪಟಳವನ್ನು ನಿಯಂತ್ರಿಸಲು ರಾಜ್ಯ ಸರಕಾರ ಪರಿಣಾಮಕಾರಿ ಕ್ರಮಕೈಗೊಳ್ಳಬೇಕು. ಉಗ್ರಗಾಮಿಗಳ ಉಪಟಳ ನಿಯಂತ್ರಿಸಬೇಕಾದರೆ ರಾಜ್ಯ ಸರಕಾರ ಜನರ ವಿಶ್ವಾಸವನ್ನು ಗಳಿಸಬೇಕು. ಮುಖ್ಯವಾಗಿ ಮೂಲಭೂತ ಸೌಕರ್ಯಗಳಾದ ನೀರು, ರಸ್ತೆ, ಶಿಕ್ಷಣ, ಆರೋಗ್ಯಕ್ಕೆ ಆದ್ಯತೆ ನೀಡಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಜಾರ್ಖಂಡ್ ರಾಜ್ಯವಾಗಿ 10 ವರ್ಷಗಳು ಸಂದಿವೆ. ಆದರೆ, ರಾಜ್ಯದ ಶೇ.82 ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳೇ ಇಲ್ಲದಿರುವುದು ಶೋಚನೀಯ ಸಂಗತಿ. ಕನಿಷ್ಟ ಶೇ.45 ರಷ್ಟು ಪ್ರದೇಶಗಳ ಜನರು ಬಡತನ ರೇಖೆಗಿಂತ ಕೆಳಮಟ್ಟದ ಜೀವನ ನಡೆಸುತ್ತಿದ್ದಾರೆ. ಇದರಿಂದಾಗಿ ನಕ್ಸಲ್ ಹಾವಳಿ ಹೆಚ್ಚಾಗಿದೆ ಎಂದು ಬಿಜೆಪಿ ಹಿರಿಯ ನಾಯಕ ಹಾಗೂ ಜಾರ್ಖಂಡ್ ನ ಹಜಾರಿಬಾಗ್ ಲೋಕಸಭೆ ಕ್ಷೇತ್ರದ ಸಂಸದ ಯಶವಂತ್ ಸಿನ್ಹಾ ಅವರು ಇತ್ತೀಚೆಗೆ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ಲೇಖನ ಬರೆದಿದ್ದರು.
(ಏಜನ್ಸೀಸ್)