ಪ್ರಜಾವಾಣಿ ಪತ್ರಕರ್ತರಿಗೆ ಶುಭವಾರ್ತೆ

ಇದೇ ವರ್ಷದ ಫೆಬ್ರವರಿ ಮಾಹೆಯಲ್ಲಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ಸುದೀರ್ಘವಾಗಿ ನಡೆದು ಕಳೆದ ಶನಿವಾರ 26 ಸೆಪ್ಟೆಂಬರ್ ರಂದು ಕಾರ್ಯನಿರತ ಪತ್ರಕರ್ತರ ಪರವಾಗಿ ಆದೇಶ ಹೊರಬಿದ್ದಿದೆ. ಈ ಆದೇಶವನ್ನು ಪ್ರಿಂಟರ್ಸ್ ಮೈಸೂರು ಪ್ರಕಾಶನದ ಆಡಳಿತ ವರ್ಗ ಅಂಗೀಕರಿಸುವುದರ ಬಗೆಗೆ ಅಲ್ಲಿನ ನೌಕರ ವಲಯಗಳಲ್ಲಿ ಭಾರೀ ಕುತೂಹಲ ಮಡುಗಟ್ಟಿದೆ. ನಿವೃತ್ತಿ ವಯಸ್ಸಿನ ಏರಿಕೆಯ ಲಾಭವನ್ನು ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿರುವ 349 ಪತ್ರಕರ್ತರು ಪಡೆಯಲಿದ್ದಾರೆ. ರಾಜಧಾನಿ ಸೇರಿದಂತೆ ರಾಷ್ಟ್ರದ ನಾನಾ ಭಾಗಗಳಲ್ಲಿ,ಕರ್ನಾಟಕದ ಮೂವತ್ತೊಂದು ಜಿಲ್ಲೆಗಳಲ್ಲಿ ಮತ್ತು ಬೆಂಗಳೂರು ಕಚೇರಿಯಲ್ಲಿ ದುಡಿಯುತ್ತಿರುವ ನೌಕರ ವರ್ಗಕ್ಕೆ ಈ ಬೆಳವಣಿಗೆ ದಸರಾ ದೀಪಾವಳಿ ಶುಭ ವಾರ್ತೆ ಎನಿಸಿದೆ.
ವಿಶೇಷವಾಗಿ 58 ವರ್ಷದ ಗಡಿ ಸಮೀಪಿಸುತ್ತಿರುವ ಪ್ರಜಾವಾಣಿ ಡೆಕ್ಕನ್ ಹೆರಾಲ್ಡ್ ಸುಧಾ ಮಯೂರ ಪತ್ರಕರ್ತರನ್ನು ಈ ಸುದ್ದಿ ಹಿಮ್ಮಡಿಯ ಮೇಲೆ ನಿಲ್ಲುವಂತೆ ಮಾಡಿದೆ. ನಿವೃತ್ತಿಯ ವಯಸ್ಸನ್ನು 58 ರಿಂದ ಮೇಲಕ್ಕೆತ್ತಬೇಕೆಂಬ ಬೇಡಿಕೆಯನ್ನು ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್ ಪತ್ರಕರ್ತರು ಆಡಳಿತ ವರ್ಗದ ಮುಂದೆ ಇಟ್ಟಿದ್ದರು. ನೌಕರರ ಪರವಾಗಿ ವಾದಿಸಿದ ಬೆಂಗಳೂರು ವೃತ್ತ ಪತ್ರಿಕಾ ನೌಕರರ ಸಂಘಕ್ಕೆ (BNEU) ಉಪ ಕಾರ್ಮಿಕ ಆಯುಕ್ತರು ಹೊರಡಿಸಿರುವ ಆದೇಶ ಧನಾತ್ಮಕವಾಗಿದೆ.
ಬೆಂಗಳೂರಿನಿಂದ ಪ್ರಕಟವಾಗುವ ಬಹುತೇಕ ಎಲ್ಲ ಪತ್ರಿಕೆಗಳಲ್ಲಿ ನಿವೃತ್ತಿ ವಯೋಮಾನ 58 ಇದೆ. ಆದರೆ, ರಾಜ್ಯ ಸರಕಾರ, ಕೇಂದ್ರ ಸರಕಾರದ ಉದ್ಯೋಗಿಗಳ ನಿವೃತ್ತಿ ವಯಸ್ಸನ್ನು 60ಕ್ಕೆ ಏರಿಸಿರುವಾಗ ಪತ್ರಕರ್ತರ ಸಮೂಹಕ್ಕೂ ಈ ಸವಲತ್ತು ದಕ್ಕಬೇಕೆನ್ನುವುದು ಬಿಎನ್ಇಯು ಕಾರ್ಮಿಕ ಮುಖಂಡರ ವಾದವಾಗಿದೆ. ಸದ್ಯಕ್ಕೆ 58ರ ಗಡಿ ದಾಟಿದ ಆಯ್ದ ನೌಕರರಿಗೆ ಒಂದೆರಡು ವರ್ಷ ನೌಕರಿ ವಿಸ್ತರಣೆ ಮಾಡುವ ಪರಿಪಾಠ ಪತ್ರಿಕಾ ಕಚೇರಿಗಳಲ್ಲಿ ಇದೆ. ಆದರೆ, ಸಂಸ್ಥೆಯಲ್ಲಿ ದುಡಿಯುವ ಸಮಸ್ತ ಪತ್ರಕರ್ತರಿಗೂ ಅನ್ವಯವಾಗುವ ನಿಟ್ಟಿನಲ್ಲಿ ನಿವೃತ್ತಿ ವಯಸ್ಸು ಮಿತಿ ಏರಿಕೆಯನ್ನು ಜಾರಿಗೆ ತರಬೇಕೆನ್ನುವುದು ಅನೇಕ ನೌಕರರ ಬೇಡಿಕೆ ಆಗಿದೆ. ಇತ್ತೀಚೆಗೆ ಪ್ರಜಾವಾಣಿಯಲ್ಲಿ ಹಿರಿಯರಾದ ಇ.ವಿ. ಸತ್ಯನಾರಾಯಣ ಮತ್ತು ಡಿ.ವಿ.ರಾಜಶೇಖರ ಅವರ ಸೇವೆಯನ್ನು ಒಂದು ವರ್ಷ ಕಾಲಕ್ಕೆ ವಿಸ್ತರಿಸಲಾಗಿರುವುದನ್ನು ಇಲ್ಲಿ ಸ್ಮರಿಸಬಹುದು.
ಕಲಾವಿದರಿಗೆ, ಸಾಹಿತಿಗಳಿಗೆ, ರಾಜಕಾರಣಿಗಳಿಗೆ ಮತ್ತು ಪತ್ರಕರ್ತರಿಗೆ ನಿವೃತ್ತಿಯೆಂಬುದೇ ಇರುವುದಿಲ್ಲವಂತೆ. ಒಂದು ವ್ಯವಸ್ಥೆ ಅಥವಾ ಸಂಸ್ಥೆಯಿಂದ ನಿವೃತ್ತಿ ಪಡೆದುಕೊಂಡರೂ, ವೃತ್ತಿ ಮತ್ತು ವೃತ್ತಿಬಯಕೆಗಳನ್ನು ಮುಂದುವರೆಸಿಕೊಂಡು ಹೋಗುವುದಕ್ಕೆ ಅವರಿಗೆ ತಡೆಗೋಡೆಗಳಿರುವುದಿಲ್ಲ. ಆದರೆ ಸಂಬಳಕ್ಕೆ, ಪಿಂಚಣಿಗೆ, ಗ್ರಾಚ್ಯೂಯಿಟಿ ಮುಂತಾದ ನಿವೃತ್ತಿ ಸೌಲಭ್ಯಗಳನ್ನು ಮಾತ್ರ ನೆಚ್ಚಿಕೊಂಡು ವೃತ್ತಿಪರರಾಗುವವರಿಗೆ ನಿವೃತ್ತಿಯ ವಯಸ್ಸು, ಹುಟ್ಟಿದ ದಿನಾಂಕ ಬಲುಮುಖ್ಯವಾಗುತ್ತದೆ. ಅನೇಕರಿಗೆ ಡೇಟ್ ಆಫ್ ಬರ್ತ್ ಆಧಾರಿತ ನೌಕರಿಯ ಕಡೆ ದಿನಾಂಕ ಅವರ ವೃತ್ತಿ ಉದ್ಯೋಗದ ಕೊನೆಯ ದಿನವೂ ಆಗುತ್ತದೆ. ಮೈಯಲ್ಲಿ ಕಸುವಿದ್ದವರು, ಮಿದುಳಲ್ಲಿ ಚುರುಕುತನ ಉಳಿಸಿಕೊಂಡವರು ಮತ್ತು ಬರೆದು ದುಡಿಯಲೇಬೇಕು, ದುಡಿದು ಕುಟುಂಬ ನಿರ್ವಹಣೆ ಮಾಡಲೇಬೇಕೆಂಬ ದರ್ದು ಇರುವವರಿಗೆ ವಯೋಮಾನ ಮಿತಿ ಅಡ್ಡಬರಬಾರದು.
(ದಟ್ಸ್ ಕನ್ನಡ ವಾರ್ತೆ)
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion












Click it and Unblock the Notifications