ಯಡಿಯೂರಪ್ಪ ಸುಳ್ಳುಗಳ ಮಹಾರಾಜ: ಉಗ್ರಪ್ಪ

V S Ugrappa
ಬೆಂಗಳೂರು, ಸೆ.23: ಬಿ.ಎಸ್. ಯಡಿಯೂರಪ್ಪ ಅಲಿಯಾಸ್ ಸುಳ್ಳುಗಳ ಮಹಾರಾಜ.ಇದು ಮುಖ್ಯಮಂತ್ರಿ ಅವರಿಗೆ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ವಿ.ಎಸ್.ಉಗ್ರಪ್ಪ ಮಾಡಿರುವ
ನಾಮಕರಣ.

ಸುಳ್ಳಿನ ಸರಮಾಲೆಯನ್ನೇ ಪೋಣಿಸುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಸುಳ್ಳುಗಳ ಮಹಾರಾಜ ಎಂದು ಕರೆಯುವುದೇ ಸೂಕ್ತಎಂಬುದಾಗಿ ಅವರು ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಹೇಳಿದರು. ಅಧಿಕಾರಕ್ಕೆ ಬರುವ ಮುನ್ನ ಬಡವರ ಬಗ್ಗೆ ಯಡಿಯೂರಪ್ಪ ಭಾರಿ ಹೇಳುತ್ತಿದ್ದರು. ಅವರಿಗೆ ಬೆಂಗಳೂರು ಮಹಾನಗರದಲ್ಲಿ 60 ಸಾವಿರ ನಿವೇಶನ ವಿತರಿಸುವುದಾಗಿ ಘೋಷಿಸಿದ್ದರು.

ಆದರೆ, ನಿವೇಶನ ಅವರ ಮಕ್ಕಳು ಮತ್ತು ಬಂಧುಗಳಿಗೆ ಮಾತ್ರಹಂಚಿಕೆಯಾಗಿದೆ. ಮಂತ್ರಿಗಳು, ಸಂಸದರಿಗೆ ಮಾತ್ರ ನಿವೇಶನ ಸಿಕ್ಕಿದೆ. ಆದರೆ, ಬಡವರನ್ನು ಒಕ್ಕಲೆಬ್ಬಿಸುವ ಕೆಲಸಆಗುತ್ತಿದೆ. ಇದೆಲ್ಲಾ ಪಾಲಿಕೆ ಚುನಾವಣೆಹಿನ್ನೆಲೆಯಲ್ಲಿ ನಡೆಯುತ್ತಿರುವ ನಾಟಕ ಎಂದು ಟೀಕಿಸಿದರು.

ಸರಕಾರದ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಮುಖ್ಯಮಂತ್ರಿ ಸುಳ್ಳುಗಳ ಸರಮಾಲೆಯನ್ನೇಪೋಣಿಸುತ್ತಿದ್ದಾರೆ. ಹೀಗಾಗಿ ದಸರಾ ಮತ್ತುರಂಜಾನ್ ಹಬ್ಬದ ಅಂಗವಾಗಿ ಅವರಿಗೆ ಹೊಸ ಹೆಸರು ನಾಮಕರಣ ಮಾಡಿರುವುದಾಗಿ ಲೇವಡಿ ಮಾಡಿದರು.

ಸರಕಾರದ ವೈಫಲ್ಯಗಳ ವಿರುದಟಛಿ ವಿಧಾನಸೌಧಕ್ಕೆ ಸೆ.26ರಂದು ದಿಗ್ಬಂಧನ ಹಾಕುವುದಾಗಿ ಕಾಂಗ್ರೆಸ್ ಘೋಷಿಸಿದ ಬಳಿಕ ಯಡಿಯೂರಪ್ಪ ದೆವ್ವ ಹಿಡಿದವರಂತೆ ವರ್ತಿಸುತ್ತಿದ್ದಾರೆ. ಜತೆಗೆ ಪ್ರತಿಪಕ್ಷಗಳಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದುದೂರಿದರು. ಒಟ್ಟಿನಲ್ಲಿ ಸರಕಾರ ಎಲ್ಲ ವಲಯಗಳಲ್ಲೂ ವಿಫಲವಾಗಿದ್ದು ಜನರ ವಿಶ್ವಾಸ ಕಳೆದುಕೊಳ್ಳುತ್ತಿದೆ ಎಂದು ಉಗ್ರಪ್ಪ ಹೇಳಿದರು.

(ಸ್ನೇಹಸೇತು: ವಿಜಯಕರ್ನಾಟಕ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+