ಶಾಸ್ತ್ರಿ ಅವರ ಚಿನ್ನದ ವಾಚ್ ಕಳುವು

ಕಾಂಗ್ರೆಸ್ ಅಧ್ಯಕ್ಷೆ ಮತ್ತು ಯುಪಿಎ ಮುಖ್ಯಸ್ಥೆ ಸೋನಿಯಾಗಾಂಧಿ ಅವರ ನಿವಾಸದ ಸಮೀಪ ಬಿಗಿ ಬಂದೋಬಸ್ತ್ ಇರುವ ಶಾಸ್ತ್ರಿ ಸ್ಮಾರಕ ಭವನದ ಪ್ರದೇಶದಲ್ಲಿ ಕೈಗಡಿಯಾರ ಕಳವಾಗಿದೆ. ಕಳುವಾಗಿರುವ ಘಟನೆ ಸೆಪ್ಟೆಂಬರ್ 3ರಂದು ಬೆಳಕಿಗೆ ಬಂದಿದ್ದರೂ ನಾಲ್ಕು ದಿನ ತಡವಾಗಿ ಪೋಲೀಸರಿಗೆ ದೂರು ನೀಡಲಾಗಿದೆ.
1966 ರಲ್ಲಿ ನಡೆದ ತಾಷ್ಕೆಂಟ್ ಒಪ್ಪಂದದಲ್ಲಿ ಮಧ್ಯಸ್ಥಿಕೆ ವಹಿಸಿದ್ದ ರಷ್ಯಾ ಪ್ರಧಾನಿ ಅಲೆಕ್ಷಿ ಕೊಸಿಗಿನ್ ಶಾಸ್ತ್ರಿಯವರಿಗೆ ಚಿನ್ನದ ರಿಸ್ಟ್ ವಾಚ್ ಅನ್ನು ಉಡುಗೆರೆಯಾಗಿ ನೀಡಿದ್ದರು. ವೈಭವೋಪಿತ ಬದುಕನ್ನು ಇಷ್ಟ ಪಡದ ಶಾಸ್ತ್ರಿ ಈ ವಾಚ್ ಅನ್ನು ತನ್ನ ಮಗ ಅನಿಲ್ ಶಾಸ್ತ್ರಿಗೆ ನೀಡಿದ್ದರು.
(ಏಜನ್ಸೀಸ್)












Click it and Unblock the Notifications