ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕೃಷ್ಣ, ತರೂರ್ ಐಷಾರಾಮಿಗೆ ಕೇಂದ್ರದ ಕೊಕ್ಕೆ
ಕಳೆದ ಮೂರು ತಿಂಗಳನಿಂದ ಕೃಷ್ಣ ಮತ್ತು ಶಶಿ ತರೂರ್ ಅವರು ನಗರದ ಪಂಚತಾರಾ ಹೋಟೆಲ್ ಗಳಾದ ಐಟಿಸಿ ಮೌರ್ಯ ಮತ್ತು ತಾಜ್ ಮಹಲ್ ಹೋಟೆಲ್ ನಲ್ಲಿ ವಾಸವಾಗಿದ್ದರು. ಆದರೆ, ದೇಶದಲ್ಲಿ ಬರಗಾಲ ತೀವ್ರಗೊಂಡಿದೆ. ಇಂತಹ ಸಂದರ್ಭದಲ್ಲಿ ಸರಕಾರ ಅನಗತ್ಯವಾಗಿ ಖರ್ಚು ಮಾಡುವುದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕ್ರಮಕೊಳ್ಳಲಾಗಿದೆ ಎಂದು ಸರಕಾರಿ ಮೂಲಗಳು ತಿಳಿಸಿವೆ. ಮೂರು ತಿಂಗಳಲ್ಲಿ ಕೃಷ್ಣ 18 ಕೋಟಿ ರುಪಾಯಿ ಪಾವತಿಸಿದ್ದರೆ, ಶಶಿ ತರೂರ್ 15 ಕೋಟಿ ರುಪಾಯಿಗಳನ್ನು ಹೋಟೆಲ್ ಗಳ ವಾಸ್ತವ್ಯಕ್ಕೆ ವೆಚ್ಚ ಮಾಡಲಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರಣಬ್ ಮುಖರ್ಜಿ, ದೇಶದಲ್ಲಿ ಬರ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಆರ್ಥಿಕ ಪರಿಸ್ಥಿತಿ ಗಂಭೀರವಾಗಿದೆ. ಹೀಗಾಗಿ ಸಚಿವರು ಸರಕಾರದ ಅಧಿಕೃತ ನಿವಾಸಕ್ಕೆ ತೆರಳಲು ಸೂಚಿಸಲಾಗಿದೆ ಎಂದರು. ಅಲ್ಲದೇ ಸಂಸದರು ಮತ್ತು ಸಚಿವರ ಮಾಸಿಕ ಸಂಬಳದ ಶೇ. ರಷ್ಟನ್ನು ಕಡಿತಗೊಳಿಸಿ ಬರ ಪರಿಹಾರ ಕಾರ್ಯಕ್ಕೆ ವಿನಿಯೋಗಿಸಲಾಗುವುದು ಎಂದು ಮುಖರ್ಜಿ ಹೇಳಿದರು.
(ಏಜನ್ಸೀಸ್)
Comments
Story first published: Wednesday, September 9, 2009, 17:57 [IST]