ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷ್ಣ, ತರೂರ್ ಐಷಾರಾಮಿಗೆ ಕೇಂದ್ರದ ಕೊಕ್ಕೆ

By Staff
|
Google Oneindia Kannada News

Pranab Mukharjee
ನವದೆಹಲಿ, ಸೆ. 8 : ರಾಜಧಾನಿಯ ಎರಡು ಪ್ರತಿಷ್ಠಿತ ಹೋಟೆಲ್ ನಲ್ಲಿ ವಾಸವಿದ್ದ ವಿದೇಶಾಂಗ ಖಾತೆ ಸಚಿವ ಎಸ್ ಎಂ ಕೃಷ್ಣ ಮತ್ತು ವಿದೇಶಾಂಗ ಖಾತೆ ರಾಜ್ಯ ಸಚಿವ ಶಶಿ ತರೂರ್ ಅವರಿಗೆ ಸರಕಾರದ ಅಧಿಕೃತ ನಿವಾಸಕ್ಕೆ ತೆರಳುವಂತೆ ಕೇಂದ್ರದ ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಳೆದ ಮೂರು ತಿಂಗಳನಿಂದ ಕೃಷ್ಣ ಮತ್ತು ಶಶಿ ತರೂರ್ ಅವರು ನಗರದ ಪಂಚತಾರಾ ಹೋಟೆಲ್ ಗಳಾದ ಐಟಿಸಿ ಮೌರ್ಯ ಮತ್ತು ತಾಜ್ ಮಹಲ್ ಹೋಟೆಲ್ ನಲ್ಲಿ ವಾಸವಾಗಿದ್ದರು. ಆದರೆ, ದೇಶದಲ್ಲಿ ಬರಗಾಲ ತೀವ್ರಗೊಂಡಿದೆ. ಇಂತಹ ಸಂದರ್ಭದಲ್ಲಿ ಸರಕಾರ ಅನಗತ್ಯವಾಗಿ ಖರ್ಚು ಮಾಡುವುದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕ್ರಮಕೊಳ್ಳಲಾಗಿದೆ ಎಂದು ಸರಕಾರಿ ಮೂಲಗಳು ತಿಳಿಸಿವೆ. ಮೂರು ತಿಂಗಳಲ್ಲಿ ಕೃಷ್ಣ 18 ಕೋಟಿ ರುಪಾಯಿ ಪಾವತಿಸಿದ್ದರೆ, ಶಶಿ ತರೂರ್ 15 ಕೋಟಿ ರುಪಾಯಿಗಳನ್ನು ಹೋಟೆಲ್ ಗಳ ವಾಸ್ತವ್ಯಕ್ಕೆ ವೆಚ್ಚ ಮಾಡಲಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರಣಬ್ ಮುಖರ್ಜಿ, ದೇಶದಲ್ಲಿ ಬರ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಆರ್ಥಿಕ ಪರಿಸ್ಥಿತಿ ಗಂಭೀರವಾಗಿದೆ. ಹೀಗಾಗಿ ಸಚಿವರು ಸರಕಾರದ ಅಧಿಕೃತ ನಿವಾಸಕ್ಕೆ ತೆರಳಲು ಸೂಚಿಸಲಾಗಿದೆ ಎಂದರು. ಅಲ್ಲದೇ ಸಂಸದರು ಮತ್ತು ಸಚಿವರ ಮಾಸಿಕ ಸಂಬಳದ ಶೇ. ರಷ್ಟನ್ನು ಕಡಿತಗೊಳಿಸಿ ಬರ ಪರಿಹಾರ ಕಾರ್ಯಕ್ಕೆ ವಿನಿಯೋಗಿಸಲಾಗುವುದು ಎಂದು ಮುಖರ್ಜಿ ಹೇಳಿದರು.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X