ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕಾಂಗ್ರೆಸ್ ನಲ್ಲಿ ಕಳ್ಳರಿದ್ದಾರೆ : ಕೃಷ್ಣಪ್ಪ
ಅಖಿಲ ಕರ್ನಾಟಕ ಕನ್ನಡ ಚಳವಳಿ ಕೇಂದ್ರ ಸಮಿತಿ ಹಮ್ಮಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸ್ ಅವರ 94ನೇ ಜನ್ಮದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಮಾಜಿ ಸಚಿವ ಸೋಮಣ್ಣ, ಭೀಮಣ್ಣ ಸೇರಿದಂತೆ ಯಾವ ಬೋ... ಏನು ಮಾಡಿದ್ದಾರೆ ಎಂಬುದು ಗೊತ್ತಿದೆ ಎಂದು ಅವಾಚ್ಯ ಶಬ್ಧ ಬಳಸಿ ಸೋಮಣ್ಣ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ದುಷ್ಟರು, ದರಿದ್ರರು, ನೀತಿಗೆಟ್ಟವರು ವಿಧಾನಸೌಧದಲ್ಲಿ ಕುಳಿತಿದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿಯಾದ ನಂತರ ಸಾಮಾಜಿಕ ನ್ಯಾಯ ದೊರೆಯದೆ ರಾಜ್ಯದಲ್ಲಿ ಅಲ್ಲೋಲಕಲ್ಲೋಲ ಉಂಟಾಗಿದೆ. ದೂರದೃಷ್ಟಿ ಇರದ, ನೀತಿ ನಿಯಮ, ಸಂವಿಧಾನ ಹಾಗೂ ನ್ಯಾಯಾಲಯದ ಆದೇಶವನ್ನೂ ಕೂಡ ಉಲ್ಲಂಘಿಸುವಂತಹ ಸರಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿದೆ ಎಂದು ಕೃಷ್ಣಪ್ಪ ವಿಷಾದಿಸಿದರು.
(ದಟ್ಸ್ ಕನ್ನಡ ವಾರ್ತೆ)
Comments
Story first published: Monday, September 7, 2009, 13:01 [IST]