ಭಾರತೀಯ ಅರ್ಚಕರ ಮೇಲೆ ಹಲ್ಲೆ: ಕೃಷ್ಣ ಖಂಡನೆ

ಹಲ್ಲೆ ನಡೆಸಿದ ಮಾವೋಗಳ ಮೇಲೆ ನೇಪಾಳ ಸರಕಾರ ಕ್ರಮಕೈಗೊಳ್ಳಬೇಕು ಎಂದು ಕೃಷ್ಣ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಭಕ್ತರ ಸೋಗಿನಲ್ಲಿ ಬಂದಿದ್ದ ಮಾವೋವಾದಿಗಳು ಕರ್ನಾಟಕದ ಶೃಂಗೇರಿ ಮೂಲದ ಅರ್ಚಕರಾದ ಗಿರೀಶ್ ಭಟ್ಟ ಮತ್ತು ರಾಘವೇಂದ್ರ ಭಟ್ಟ ಅವರನ್ನು ಥಳಿಸಿದ್ದರು.
ಭಾರತೀಯ ಅರ್ಚಕರನ್ನು ನೇಮಿಸಿಕೊಳ್ಳುವುದಕ್ಕೆ ಮಾವೋವಾದಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಸ್ಥಳೀಯರನ್ನೇ ಅರ್ಚಕರನ್ನಾಗಿ ನೇಮಿಸಿಕೊಳ್ಳಬೇಕು ಎಂದು ಮಾವೋವಾದಿಗಳು ಆಗ್ರಹಿಸುತ್ತಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications