ಭಾರತೀಯ ಅರ್ಚಕರ ಮೇಲೆ ಹಲ್ಲೆ: ಕೃಷ್ಣ ಖಂಡನೆ

SM Krishna condemns attack on Indian priests in Nepal
ಕಠ್ಮಂಡು, ಸೆ.5: ನೇಪಾಳದ ಪಶುಪತಿನಾಥ ದೇವಾಲಯಕ್ಕೆ ನೇಮಕಗೊಂಡಿರುವ ಕರ್ನಾಟಕದ ಇಬ್ಬರು ಅರ್ಚಕರ ಮೇಲೆ ನಡೆದಿರುವ ಹಲ್ಲೆಯನ್ನು ಕೇಂದ್ರ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಖಂಡಿಸಿದ್ದಾರೆ. ಅವರು ಶನಿವಾರ ಬೆಂಗಳೂರಿನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

ಹಲ್ಲೆ ನಡೆಸಿದ ಮಾವೋಗಳ ಮೇಲೆ ನೇಪಾಳ ಸರಕಾರ ಕ್ರಮಕೈಗೊಳ್ಳಬೇಕು ಎಂದು ಕೃಷ್ಣ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಭಕ್ತರ ಸೋಗಿನಲ್ಲಿ ಬಂದಿದ್ದ ಮಾವೋವಾದಿಗಳು ಕರ್ನಾಟಕದ ಶೃಂಗೇರಿ ಮೂಲದ ಅರ್ಚಕರಾದ ಗಿರೀಶ್ ಭಟ್ಟ ಮತ್ತು ರಾಘವೇಂದ್ರ ಭಟ್ಟ ಅವರನ್ನು ಥಳಿಸಿದ್ದರು.

ಭಾರತೀಯ ಅರ್ಚಕರನ್ನು ನೇಮಿಸಿಕೊಳ್ಳುವುದಕ್ಕೆ ಮಾವೋವಾದಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಸ್ಥಳೀಯರನ್ನೇ ಅರ್ಚಕರನ್ನಾಗಿ ನೇಮಿಸಿಕೊಳ್ಳಬೇಕು ಎಂದು ಮಾವೋವಾದಿಗಳು ಆಗ್ರಹಿಸುತ್ತಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+