ಅಭಿಮಾನದ ವಿಷಕ್ಕೆ ಆಂಧ್ರದಲ್ಲಿ ನೂರಾರು ಬಲಿ

ತೆಲುಗು ಚಿತ್ರರಂಗ ಹಾಗೂ ರಾಜಕಾರಣದಲ್ಲಿ ಅನಭಿಷಕ್ತ ದೊರೆಯಾಗಿ ಮೆರೆದಿದ್ದ ಎನ್ ಟಿ ರಾಮರಾವ್ ಅವರ ನಿಧನಕ್ಕಿಂತ ವೈಎಸ್ಆರ್ ಸಾವು ಜನಸಾಮಾನ್ಯರ ಭಾರಿ ಪ್ರಭಾವ ಬೀರಿದೆ. ಬಹುಶಃ ಭಾರತದ ರಾಜಕಾರಣದ ಇತಿಹಾಸದಲ್ಲಿ ಯಾವ ನೇತಾರರಿಗೂ ಇಂತಹ ಭಾವನಾತ್ಮಕ ದೃಶ್ಯ ಸಿಗುವುದು ಅಪರೂಪ. ನಲ್ಲಮಲ್ಲ ಅರಣ್ಯದಲ್ಲಿ ಹೆಲಿಕ್ಯಾಪ್ಟರ್ ಕಾಣೆಯಾಗಿ ವೈಎಸ್ಆರ್ ನಾಪತ್ತೆಯಾಗಿದ್ದಾರೆ ಎನ್ನುವುದು ಅಲ್ಲಿಯ ಜನತೆಗೆ ಅರಗಿಸಿಕೊಳ್ಳಲಾಗದ ಸತ್ಯವಾಗಿತ್ತು. ನೆಚ್ಚಿನ ನಾಯಕ, ಬಡವರ ಬಂಧು ಅಕಾಲಿಕ ಮರಣಕ್ಕೆ ತುತ್ತಾಗಿದ್ದಾರೆ ಎಂದು ಸುದ್ದಿ ಮುಟ್ಟುತ್ತಿದ್ದಂತೆಯೇ ಆಂಧ್ರಪ್ರದೇಶ ಕುಸಿದು ಕುಳಿತಿತು.
ಜನಸಾಮಾನ್ಯರಿಗೆ ಗಾಢ್ ಫಾದರ್ ಆಗಿದ್ದ ವೈಎಸ್ಆರ್ ಸಾವು ಅವರಿಗೆ ಬರಸಿಡಿಲಿನಂತಾಗಿತ್ತು. ಅನೇಕರು ಅತ್ಮಹತ್ಯೆ ಮಾಡಿಕೊಂಡರು, ಹಲವರು ಹೃದಯಾಘಾತದಿಂದ ಮೃತಪಟ್ಟರು, ಅಸಂಖ್ಯ ಜನರು ಆಸ್ಪತ್ರೆಗೆ ಸೇರಿದ್ದಾರೆ. ಮತ್ತೊಂದಿಷ್ಟು ಮಂದಿ ವೈಎಸ್ಆರ್ ಸಾವು ನಮಗೆ ತುಂಬಲಾರದ ನಷ್ಟವಾಗಿದೆ. ಅವರ ಹುದ್ದೆ ತುಂಬಲು ಅವರ ಮಗ ಜಗನ್ಮೋಹನ್ ರೆಡ್ಡಿ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ರಾಜಶೇಖರರೆಡ್ಡಿ ಅವರನ್ನು ಜನಸಾಮಾನ್ಯರು ಏಕೆ ಅಷ್ಟೊಂದು ಪ್ರೀತಿಸುತ್ತಾರೆ ಎನ್ನುವುದಕ್ಕೆ ಸ್ಪಷ್ಟ ಕಾರಣವಿದೆ. ವೈಎಸ್ಆರ್ ಬರೀ ಮುಖ್ಯಮಂತ್ರಿ ಆಗಿರಲಿಲ್ಲ. ಬಡವರ ಬಂಧು ಆಗಿದ್ದರು. ಗ್ರಾಮದಲ್ಲಿರುವ ಕಟ್ಟಕಡೆಯ ಪ್ರಜೆಗೂ ಸರಕಾರಿ ಸವಲತ್ತುಗಳು ಸಿಗಬೇಕು ಎಂಬ ಏಕೈಕ ಗುರಿ ಹೊಂದಿದ್ದ ರೆಡ್ಡಿ ಅವರ ಮಾನವೀಯ ಚಿಂತನೆಯೇ ಜನರ ಅತಿರೇಕದ ಅಭಿಮಾನಕ್ಕೆ ಸಾಕ್ಷಿಯಾಗಿದೆ. ಜನಸಾಮಾನ್ಯರ ಏಳ್ಗೆಗೆ ಅವರು ಕೈಗೊಂಡ ಆರೋಗ್ಯಶ್ರೀ, ಜಲಯಜ್ಞ, ಶೇ. 3ರ ಬಡ್ಡಿ ಸಾಲ, ವಯೋವೃದ್ಧರಿಗೆ ಮಾಶಾಸನ ಸೇರಿ ಅನೇಕ ಜನಪರ ಕಾರ್ಯಕ್ರಮಗಳು ರೆಡ್ಡಿ ಅವರು ಜನರಿಗೆ ಮತ್ತಷ್ಟು ಹತ್ತಿರವಾದರು.
ವೈಎಸ್ಆರ್ ನಿಧನದ ಸುದ್ದಿ ಕೇಳಿ ತಿಂಗಳು ಮಾಶಾಸನ ಪಡೆಯುತ್ತಿದ್ದ ವಿಕಾಲಾಂಗ ದಂಪತಿ ಮುಂದಿನ ಜೀವನ ಹೇಗೆ ಎಂದು ದೊಡ್ಡ ಪ್ರಶ್ನೆಯಾಗಿ ಬಾವಿಗೆ ಹಾರಿ ಅತ್ಮಹತ್ಯೆ ಮಾಡಿಕೊಂಡಿದ್ದಾರೆ. ಜನರಿಗಾಗಿ ಜೀವನ ತ್ಯಾಗ ಮಾಡಿದ ವೈಎಸ್ಆರ್ ಗೆ, ಅವರಿಗಾಗಿ ನನ್ನ ಜೀವನ ತ್ಯಾಗ ಮಾಡುವೆ ಎಂದು ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗಳು ನಡೆದಿವೆ.
ರಾಜ್ಯ ತುಂಬಾ ಇಂತಹ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆಯೇ ವೈಎಸ್ಆರ್ ಮಗ ಜಗನ್ಮೋಹನ್ ರೆಡ್ಡಿ, ಸಾರ್ವಜನಿಕರಲ್ಲಿ ಶಾಂತಿ ಸಮಾಧಾನದಿಂದ ವರ್ತಿಸಿ, ಅತ್ಮಹತ್ಯೆಯಂತಹ ಭೀಕರ ಕೆಲಸ ಕೈಹಾಕಬೇಡಿ ಎಂದು ಅಭಿಮಾನಿಗಳನ್ನು ಕೋರಿದ್ದಾರೆ. ನಾವು ನೀವು ಎಲ್ಲರೂ ಸೇರಿ ತಂದೆಯನ್ನು ಬಿಳ್ಕೊಡೋಣ ಎಂದು ಮಾಡಿಕೊಂಡ ಮನವಿಯನ್ನು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಅಭಿಮಾನಿಗಳಿಲ್ಲ. ಒಟ್ಟಿನಲ್ಲಿ ಭಾರತದ ರಾಜಕೀಯ ಇತಿಹಾಸದಲ್ಲಿ ವೈಎಸ್ಆರ್ ದುರಂತ ಅಂತ್ಯ ಮತ್ತೊಂದು ಇತಿಹಾಸವನ್ನು ಹುಟ್ಟು ಹಾಕಿದ್ದಂತೂ ಸುಳ್ಳಲ್ಲ.
(ಏಜನ್ಸೀಸ್)
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications