ಹೆಲಿಕಾಫ್ಟರ್ ಪತ್ತೆ; ವೈಎಸ್ಸಾರ್ ಸ್ಥಿತಿ ಇನ್ನು ನಿಗೂಢ

ಹೆಲಿಕಾಫ್ಟರ್ ಅಪಘಾತಕ್ಕೀಡಾಗಿದೆಯೇ ಅಥವಾ ಸುರಕ್ಷಿತವಾಗಿ ಇಳಿದಿದೆಯೇ ಎನ್ನುವುದರ ಬಗ್ಗೆ ಇನ್ನು ಸ್ವಲ್ಪ ಸಮಯದಲ್ಲಿ ಹೆಚ್ಚಿನ ಮಾಹಿತಿ ಲಭಿಸಬಹುದು ಎಂದು ನಿರೀಕ್ಷಿಸಲಾಗಿದೆ. ಭಾರತೀಯ ಸೇನಾಪಡೆಯ ಅಧಿಕಾರಿಗಳು ಇದು ರಾಜಶೇಖರ ರೆಡ್ಡಿ ಪ್ರಯಾಣಿಸುತ್ತಿದ್ದ ಹೆಲಿಕಾಫ್ಟರ್ ಎಂದು ದೃಢಪಡಿಸಿದ್ದಾರೆ.
ಹೆಲಿಕಾಫ್ಟರ್ನಲ್ಲಿ ಪ್ರಯಾಣಿಸುತ್ತಿದ್ದ ಆಂಧ್ರ ಪ್ರದೇಶದ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿ ಅವರ ನಿಗೂಢ ನಾಪತ್ತೆಯ ಹಿನ್ನೆಲೆಯಲ್ಲಿ, ಅತ್ಯಂತ ಬೃಹತ್ ಮಟ್ಟದ ಶೋಧಕಾರ್ಯ ಗುರುವಾರ ಬೆಳಕು ಹರಿದ ತಕ್ಷಣ ಆರಂಭಗೊಂಡಿತ್ತು. ಬೆಟ್ಟದ ಮೇಲೆ ರಕ್ಷಣಾ ಪಡೆಯ ಮೂರು ಹೆಲಿಕಾಫ್ಟರ್ ಗಳು ಲ್ಯಾಂಡ್ ಆಗಲು ಪ್ರಯತ್ನಿಸುತ್ತಿವೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications