ಸೋಮಣ್ಣ ಸೋಲು ಖುಷಿಕೊಟ್ಟಿಲ್ಲ : ದೇವೇಗೌಡ

HD Deve Gowda
ಬೆಂಗಳೂರು, ಸೆ. 1 : ಅಕ್ಟೋಬರ್ ಮೊದಲ ವಾರದಿಂದ ರಾಜ್ಯದ ಎಲ್ಲಾ ಭಾಗಗಳಿಗೆ ಪ್ರವಾಸ ಕೈಗೊಂಡು ಜೆಡಿಎಸ್ ಪಕ್ಷವನ್ನು ಬಲಿಷ್ಟಗೊಳಿಸುತ್ತೇನೆ. ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದೇ ನನ್ನ ಗುರಿ, ಇದಕ್ಕಾಗಿ ಅವಿರತ ಹೋರಾಟ ನಡೆಸುತ್ತೇನೆ. ಜೆಡಿಎಸ್ ಮತ್ತೆ ಅಧಿಕಾರಕ್ಕೆ ಬಂದ ನಂತರವೇ ನಾನು ಕೊನೆಯುಸಿರೆಳೆಯುವುದು ಎಂದು ಮಾಜಿ ಪ್ರಧಾನಿ ದೇವೇಗೌಡ ಭಾವುಕರಾಗಿ ನುಡಿದಿದ್ದಾರೆ.

ನಗರದ ಅರಮನೆ ಮೈದಾನದಲ್ಲಿ ಪಕ್ಷ ಹಮ್ಮಿಕೊಂಡಿದ್ದ 'ಆತ್ಮವಿಕಾಸದಿಂದ ಪಕ್ಷ ವಿಕಾಸ ಸಮಾವೇಶ' ದಲ್ಲಿ ಮಾತನಾಡುತ್ತಿದ್ದ ದೇವೇಗೌಡ, ರಾಜ್ಯದಲ್ಲಿ ಬಿಜೆಪಿಗೆ ಸಡ್ಡು ಹೊಡೆಯುವ ತಾಕತ್ತು ಇರುವುದು ನಮ್ಮ ಪಕ್ಷಕ್ಕೆ ಮಾತ್ರ. ಇದನ್ನು ಕಾಂಗ್ರೆಸ್ ನಾಯಕರು ಅರ್ಥ ಮಾಡಿಕೊಂಡರೆ ಒಳಿತು. ನಾವಾಗಿಯೇ ಅವರ ಮನೆ ಬಾಗಿಲಿಗೆ ಹೋಗುವುದಿಲ್ಲ. ಪಕ್ಷವನ್ನು ಸರಿಯಾದ ಪಥದಲ್ಲಿ ಸಾಗಿಸಲು ಕುಮಾರಸ್ವಾಮಿ ಜೆಡಿಎಸ್ ಬಂಡಿಯನ್ನು ಎಳೆಯುವ ಎಂಜಿನ್ ಆಗಲಿ ಎಂದು ಹಾರೈಸಿದರು.

ಸೋಮಣ್ಣ ಅವರ ಸೋಲಿನಿಂದ ನನಗೇನೂ ಸಂತೋಷವಾಗಿಲ್ಲ. ಆದರೆ ಜನತೆ ಆಪರೇಷನ್ ಕಮಲಕ್ಕೆ ಸರಿಯಾದ ಪಾಠ ಕಲಿಸಿದ್ದಕ್ಕೆ ಸಂತೋಷವಾಗಿದೆ. ಮರು ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ ಪಿ ಜಿ ಆರ್ ಸಿಂಧ್ಯಾ ಅವರನ್ನು ಮತ್ತೆ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುವುದು. ಸಿಂಧ್ಯಾ ಜೊತೆ ಅವರ ಬೆಂಬಲಿಗರು ಜೆಡಿಎಸ್ ಸೇರಲಿದ್ದಾರೆಂದು ದೇವೇಗೌಡ ಈ ಸಂದರ್ಭದಲ್ಲಿ ಹೇಳಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+