5 ಸಂಪುಟದಲ್ಲಿ ದೇವೇಗೌಡರ ಜೀವನಚರಿತ್ರೆ

ಬಾಲ್ಯ, ಹುಟ್ಟೂರಿನ ವಾತಾವರಣ, ಕುಟುಂಬದ ಪರಿಸ್ಥಿತಿ ಸೇರಿದಂತೆ ರಾಜಕೀಯ ಪ್ರವೇಶ ತನಕ ಒಂದು ಹಂತ, ರಾಜಕೀಯದಲ್ಲಿ ನೆಲೆ ಕಂಡುಕೊಳ್ಳುವ ತನಕ ಹೋರಾಟ, ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ಬಳಿಕ ಸತತ ಆರು ಬಾರಿ ಹೊಳೇನರಸೀಪುರ ಕ್ಷೇತ್ರದಲ್ಲಿ ಆಯ್ಕೆಯಾಗಿ ಸೇವೆ ಸಲ್ಲಿಸಿದ ವಿವರ, ಪ್ರತಿಪಕ್ಷ ನಾಯಕ, ಮುಖ್ಯಮಂತ್ರಿ, ಪ್ರಧಾನಮಂತ್ರಿ ಹುದ್ದೆಯ ತನಕ ಆದ ಅನುಭವಗಳು ಮತ್ತು ಪಕ್ಷ ಸಂಘಟನೆಯ ಹೋರಾಟದ ವಿಷಯಗಳು ಜೀವನ ಚರಿತ್ರೆಯಲ್ಲಿವೆ ಎನ್ನಲಾಗಿದೆ.
ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ದೇವೇಗೌಡ, ತಮ್ಮನ್ನು ರಾಜಕೀಯವಾಗಿ ಮೂಲೆಗುಂಪು ಮಾಡುವ ಉದ್ದೇಶದಿಂದ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಷಡ್ಯಂತ್ರ ರೂಪಿಸಿದ್ದವು. ಆದರೆ ಇದ್ಯಾವುದೂ ಫಲ ನೀಡಲಿಲ್ಲ. ನಮ್ಮ ಪಕ್ಷಕ್ಕೆ ದಾಖಲೆ ಜಯ ತಂದುಕೊಟ್ಟ ಮತದಾರರನ್ನು ನನ್ನ ಕೊನೆಯುಸಿರಿರುವವರೆಗೆ ಮರೆಯುವುದಿಲ್ಲ ಎಂದು ಹೇಳಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications