ಓಬಳಾಪುರಂ ಗಣಿ ಸರ್ವೆ: ಕೋರ್ಟ್ ನೋಟೀಸ್
ನವದೆಹಲಿ, ಆ. 25: ಸಚಿವ ಜನಾರ್ಧನ ರೆಡ್ಡಿ ಅವರ ಒಡೆತನದಲ್ಲಿರುವ ಓಬಾಳಾಪುರಂ ಗಣಿ ಸರ್ವೆ ಸಂಬಂಧ ಸುಪ್ರೀಂ ಕೋರ್ಟ್ ಕೇಂದ್ರ, ಆಂಧ್ರಪ್ರದೇಶ ಸರಕಾರಕ್ಕೆ, ಸೆಂಟ್ರಲ್ ಎಂಪವರಿಂಗ್ ಕಮಿಟಿ ಹಾಗೂ ಅರಣ್ಯ ಸಲಹಾ ಸಮಿತಿಗೆ ಸೋಮವಾರ (ಆ 24) ನೋಟೀಸ್ ಜಾರಿ ಮಾಡಿದೆ.
ಓಬಾಳಾಪುರಂ ಗಣಿ ಸರ್ವೆ ನಡೆಸುವಂತೆ ಕೋರ್ಟ್ ಸೂಚನೆ ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ ಸುಪ್ರೀಂಕೋರ್ಟ್ ಈ ನೋಟೀಸ್ ಜಾರಿ ಮಾಡಿದೆ. ಆರು ವಾರಗಳಲ್ಲಿ ಗಣಿ ಸರ್ವೆ ನಡೆಸಿ ವರದಿ ನೀಡುವಂತೆ ಮುಖ್ಯ ನಾಯಮೂರ್ತಿ ಕೆಜಿ ಬಾಲಕೃಷ್ಣನ್, ನ್ಯಾಯಮೂರ್ತಿಗಳಾದ ಪಿ ಸದಾಶಿವಂ ಮತ್ತು ಬಿ ಎಸ್ ಚೌಹಾಣ್ ಅವರನ್ನೊಳಗೊಂಡ ಪೀಠ ನೋಟೀಸ್ ನಲ್ಲಿ ತಿಳಿಸಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications