ಸಚಿವರಾಗಿ ಸೋಮಣ್ಣ ಮುಂದುವರಿಕೆ!

ಹಾಗಾಗಿ ಗೋವಿಂದರಾಜ ನಗರ ಉಪಚುನಾವಣೆಯಲ್ಲಿ ಸೋತಿರುವ ವಸತಿ ಮತ್ತು ಮುಜರಾಯಿ ಸಚಿವ ವಿ.ಸೋಮಣ್ಣ ಅವರ ರಾಜೀನಾಮೆಯನ್ನು ತತ್ಕ್ಷಣಕ್ಕೆ ಪಡೆಯುವ ಸಾಧ್ಯತೆ ಇಲ್ಲ. ಸೋಮಣ್ಣ ಅವರು ಚುನಾವಣೆಯಲ್ಲಿ ಸೋತಿದ್ದರೂ ಬಿಬಿಎಂಪಿ ಚುನಾವಣೆ ಮುಗಿಯುವ ತನಕ ಅವರ ರಾಜೀನಾಮೆ ವಿಚಾರದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಯಾವುದೇ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇಲ್ಲ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಅಕ್ಟೋಬರ್ ಇಲ್ಲವೇ ಸೆಪ್ಟಂಬರ್ ನಲ್ಲಿ ನಡೆಯಲಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ತನಕ ಸೋಮಣ್ಣ ಅವರು ಸಚಿವರಾಗಿ ಮುಂದುವರಿಯುವ ಸಾಧ್ಯತೆಗಳಿವೆ. ಜೂ. 18ರಂದು ಸೋಮಣ್ಣ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಡಿ. 18ರವರೆಗೆ ತಾಂತ್ರಿಕವಾಗಿ ಸಚಿವ ಸಂಪುಟದಲ್ಲಿ ಮುಂದುವರಿಯಲು ಸೋಮಣ್ಣ ಅವರಿಗೆ ಅವಕಾಶವಿದೆ. ಈ ಹಿನ್ನೆಲೆಯಲ್ಲಿ ಸೋಮಣ್ಣ ಅವರು ಚುನಾವಣೆಯಲ್ಲಿ ಸೋತರೂ ಸಚಿವರಾಗಿ ಮುಂದುವರಿಯಲು ಯಾವುದೇ ಆತಂಕ ಇದ್ದಂತಿಲ್ಲ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications