ಎಚ್1ಎನ್1 ಬಗ್ಗೆ ಪ್ರಚಾರಾಂದೋಲನ
ಬೆಂಗಳೂರು, ಆ.22: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕಾಣಿಸಿಕೊಂಡಿರುವ ಡೆಂಗ್ಯೂ, ಚಿಕನ್ಗುನ್ಯ, ಹೆಚ್1ಎನ್1 ಇತ್ಯಾದಿ ಸಾಂಕ್ರಮಿಕ ರೋಗಗಳು ಒಬ್ಬರಿಂದ ಒಬ್ಬರಿಗೆ ಬಹುಬೇಗ ಹರಡುತ್ತಿವೆ. ಕೂಡಲೇ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಾದ ಕಾರಣ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ನಗರಸಭೆ/ಪುರಸಭೆ/ಪಟ್ಟಣ ಪಂಚಾಯತ್ತಿಗಳ ಅಧಿಕಾರಿಗಳು, ಸಮರೋಪಾದಿಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಆರ್. ಕೆ. ರಾಜು ತಿಳಿಸಿದರು.
ಜನಸಾಮಾನ್ಯರು ಆತಂಕ-ಭೀತಿಗೊಳ್ಳದ ರೀತಿ ಸರಿಯಾದ ಮಾಹಿತಿಯನ್ನು ಅವರಿಗೆ ತಲುಪಿಸಿ, ಅರಿವುಂಟು ಮಾಡುವ ಬಗ್ಗೆ ತೀವ್ರ ಪ್ರಚಾರಾಂದೋಲನ ಕೈಗೊಳ್ಳಬೇಕಿದೆ ಎಂದು ರಾಜು ಹೇಳಿದರು. ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ ಸಾಂಕ್ರಮಿಕ ರೋಗಗಳ ನಿಯಂಥ್ರಣ ಕುರಿತ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡುತ್ತಿದ್ದರು. ರೋಗ ಲಕ್ಷಣಗಳು ಹಾಗೂ ನಿಯಂತ್ರಣದ ಬಗ್ಗೆ ರೇಡಿಯೋ, ಟಿ.ವಿ. ಚಲನಚಿತ್ರ ಮಂದಿರಗಳಲ್ಲಿ ಪ್ರಚಾರ, ಹೋರ್ಡಿಂಗ್ಸ್ಗಳ ಪ್ರಕಟಣೆ ಕರಡುಪತ್ರ ಬ್ಯಾನರ್ಸ್ಗಳ ಮೂಲಕ ಸಾರ್ವಜನಿಕರಲ್ಲಿ ಸಾಕಷ್ಟು ಜಾಗೃತಿಯುಂಟುಮಾಡುವುದು.
ನಿರಂತರ ಸ್ವಚ್ಚತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು, ವಾರ್ಡ್ಗಳಲ್ಲಿ ನಿಯಮಿತವಾಗಿ ಫಾಗಿಂಗ್ ಮಾಡುವುದು, ಫಾಗಿಂಗ್ ಯಂತ್ರಗಳ ಕೊರತೆಯಿದ್ದಲ್ಲಿ ಪ್ರತಿ ತಾಲ್ಲೂಕಿಗೆ ಕನಿಷ್ಠ ಮೂರು ಯಂತ್ರಗಳನ್ನಾದರೂ ಖರೀದಿಸಿ ಕಾರ್ಯೋನ್ಮುಖರಾಗದಿದ್ದಲ್ಲಿ ಅಧಿಕಾರಿಗಳ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಅಧಿಕಾರಿಗಳ ಮಾಹಿತಿಗಾಗಿ ಜಿಲ್ಲಾ ಆರೋಗ್ಯಾಧಿಕಾರಿಗಲು ಹಂದಿಜ್ವರ ಎಂದೇ ಪ್ರಚಲಿತವಿರುವ ಹೆಚ್1 ಎನ್1 ರೋಗವನ್ನು, ಹಂದಿಜ್ವರ ಎಂದು ಕರೆಯಬಾರದು, ಹಂದಿಯಿಂದಾಗಲಿ ಅಥವಾ ಹಂದಿ ಮಾಂಸ ತಿನ್ನುವುದರಿಂದಾಗಲಿ ಈ ರೋಗ ಹರಡುವುದಿಲ್ಲ ಎಂದು ಸ್ವಷ್ಟಪಡಿಸಿದರು. ಗಾಳಿಯಲ್ಲಿ ವೈರಸ್ ಮೂಲಕ ಮನುಷ್ಯರಿಂದ ಮನುಷ್ಯರಿಗೆ ಹೆಚ್1ಎನ್1 ಹರಡುವುದರಿಂದ ಸೋಂಕಿತರು ಮಾಸ್ಕ್ಧರಿಸಬೇಕೆ ವಿನಹಾ ಉಳಿದವರು ಹಾಕಿಕೊಂಡು ಪ್ರಯೋಜನವಿಲ್ಲ ಎಂದು ತಿಳಿಸಿದರು.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications