Get Updates
Get notified of breaking news, exclusive insights, and must-see stories!

ಎಚ್ಡಿಕೆ ಭಂಟ ರಾಜುಗೆ ಗೆಲುವಿನ ಕನಸು

K Raju
ಬೆಂಗಳೂರು, ಆ.21:ರಾಜ್ಯದ 5 ವಿಧಾನಸಭಾ ಕ್ಷೇತ್ರಗಳಿಗೆ ಆ.18 ರಂದು ನಡೆದ ಉಪ ಚುನಾವಣೆಯ ಫಲಿತಾಂಶ ಇಂದು ಹೊರಬೀಳಲಿದ್ದು, 71 ಜನ ಅಭ್ಯರ್ಥಿಗಳ ಭವಿಷ್ಯ ತಿಳಿಯಲಿದೆ. ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಪ್ರಕಿಯೆ ಆರಂಭವಾಗಿದೆ. ಆರಂಭಿಕ ಹಿನ್ನೆಡೆ ಪಡೆದಿದ್ದ ಬಿಜೆಪಿ ಇತ್ತೀಚಿನ ವರದಿಯಂತೆ ಎರಡು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ ಎರಡು ಹಾಗೂ ಜೆಡಿಎಸ್ ಒಂದು ಕ್ಷೇತ್ರದಲ್ಲಿ ಮುನ್ನಡೆಯಲ್ಲಿದೆ.

ಒಟ್ಟು 15 ಹಂತದ ಮತ ಎಣಿಕೆ ಕಾರ್ಯ ನಡೆಯಲಿದ್ದು. ಸಮಯ 9.45 ರ ಮತ ಎಣಿಕೆಯಂತೆ ಅಭ್ಯರ್ಥಿಗಳ ಸ್ಥಿತಿ ಗತಿ ಹೀಗಿದೆ:
ರಾಮನಗರದಲ್ಲಿ ಮೂರು ಹಂತದ ಎಣಿಕೆ ಮುಗಿದಿದ್ದು, ಜೆಡಿಎಸ್ ನ ಕೆ.ರಾಜು ಅವರು ಕಾಂಗ್ರೆಸ್ಸಿನ ಸಿಎಂ ಲಿಂಗಪ್ಪ ಅವರಿಗಿಂತ 8066 ಮತಗಳಿಂದ ಮುನ್ನಡೆಯಲ್ಲಿದ್ದಾರೆ. ಉಳಿದಂತೆ ಚಿತ್ತಾಪುರದಲ್ಲಿ 4ನೇ ಸುತ್ತಿನ ಮತಎಣಿಕೆ ನಂತರ ಪ್ರಿಯಾಂಕಾ ಖರ್ಗೆ ಅವರು ಬಿಜೆಪಿಯ ವಾಲ್ಮೀಕಿ ನಾಯಕ ಅವರಿಗಿಂತ 1174ಮತಗಳಿಂದ ಮುಂದಿದ್ದರು. ಆದರೆ, ಕುತೂಹಲ ತಿರುವು ಪಡೆದು ಕೊಂಡು 8ನೇಸುತ್ತಿನ ಎಣಿಕೆಗೂ ಮುನ್ನ ವಾಲ್ಮೀಕಿ ನಾಯಕ್ 366 ಮತಗಳಿಂದ ಮುನ್ನಡೆ ಪಡೆದಿದ್ದಾರೆ.

ಗೋವಿಂದರಾಜನಗರದಲ್ಲಿ ಕಾಂಗ್ರೆಸ್ ನ ಪ್ರಿಯಾಕೃಷ್ಣ ಅವರು ಬಿಜೆಪಿ ವಿ ಸೋಮಣ್ಣ ಅವರಿಗಿಂತ 979ಮತಗಳಿಂದ ಮುಂದಿದ್ದಾರೆ. ಚನ್ನಪಟ್ಟಣದಲ್ಲಿ ಬಿಜೆಪಿಯ ಸಿಪಿ ಯೋಗಿಶ್ವರ್ ಅವರಿಗಿಂತ ಜೆಡಿಎಸ್ ನ ಎಂ ಅಶ್ವಥ್ ಅವರು7000 ಮತಗಳಿಂದ ಮುನ್ನಡೆ ಪಡೆದಿದ್ದಾರೆ. ಕೊಳ್ಳೇಗಾಲದಲ್ಲಿ ಮಾತ್ರ ಬಿಜೆಪಿ ಮುನ್ನಡೆ ಸಾಧಿಸಿದ್ದು, ಜಿಎನ್ ನಂಜುಂಡಸ್ವಾಮಿ ಅವರು ಕಾಂಗ್ರೆಸ್ಸಿನ ಜಯಣ್ಣ ಅವರಿಗಿಂತ 2520 ಮತಗಳಿಂದ ಮುಂದಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+