ಗೋವಿಂದರಾಜನಗರ : ಸೋಮಣ್ಣಗೆ ಸೋಲು

ಕಳೆದ ಮೂರು ಬಾರಿ ಸತತವಾಗಿ ವಿಜಯನಗರ ಹಾಗೂ ಗೋವಿಂದರಾಜ ನಗರದಲ್ಲಿ ಗೆಲುವು ಸಾಧಿಸಿದ್ದ ವಿ ಸೋಮಣ್ಣ ಅವರು ಈ ಕ್ಷೇತ್ರದಲ್ಲಿ ಜನನಾಯಕ ಎಂದೇ ಖ್ಯಾತರಾಗಿದ್ದರು. ಆಪರೇಷನ್ ಕಮಲದ ಮೂಲಕ ಬಿಜೆಪಿ ಸೇರ್ಪಡೆಗೊಂಡಿದ್ದ ಸೋಮಣ್ಣ ಅವರಿಗೆ ಮತದಾರ ಪ್ರಭು ಈ ಬಾರಿಗೆ ಒಲವು ತೋರಲಿಲ್ಲ. ಇದೇ ಮೊದಲ ಬಾರಿಗೆ ಚುನಾವಣೆ ಸ್ಪರ್ಧಿಸಿದ್ದ ವಿಜಯನಗರ ಕ್ಷೇತ್ರದ ಶಾಸಕ ಕೃಷ್ಣಪ್ಪ ಅವರ ಮಗ ಪ್ರಿಯಾಕೃಷ್ಣ ಕಾಂಗ್ರೆಸ್ ಪಕ್ಷದ ಮೂಲಕ ಜಯಭೇರಿ ಭಾರಿಸಿ ವಿಧಾನಸಭೆ ಪ್ರವೇಶಿಸಿದ್ದಾರೆ. ಪ್ರಿಯಾಕೃಷ್ಣ ಅವರಿಗೆ 64,171 ಮತಗಳನ್ನು ಪಡೆದುಕೊಂಡಿದ್ದರೆ, ಸಚಿವ ವಿ ಸೋಮಣ್ಣ ಅವರಿಗೆ 58,947 ಮತಗಳನ್ನು ಪಡೆದುಕೊಂಡಿದ್ದಾರೆ. ಸೋಮಣ್ಣ ಅವರಿಗಿದ್ದ ಅತಿಯಾದ ಆತ್ಮವಿಶ್ವಾಸವೇ ಅವರ ಗೆಲುವಿಗೆ ಮುಳುವಾಯಿತು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications