ಇದು ಗ್ರಾಮೀಣ ಜನರ ಗೆಲುವು :ಎಚ್ಡಿಕೆ

ಪಕ್ಷದ ಗೆಲುವಿನ ಸುದ್ದಿ ತಿಳಿದ ನಂತರ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು "ಗೆಲುವಿನ ಆತ್ಮ ವಿಶ್ವಾಸ ಇತ್ತು. ಗೆಲುವು ಸಂಪೂರ್ಣ ಗ್ರಾಮಾಂತರ ಜನರಿಗೆ ಸಲ್ಲಬೇಕು. ಪ್ರಮುಖವಾಗಿ ನಮ್ಮ ತಂದೆ ದೇವೇಗೌಡ ಅವರಿಗೆ ಮತ್ತು ಗ್ರಾಮೀಣ ಜನರಿಗೆ ಇದ್ದ ಬಾಂದವ್ಯ ಗೆಲುವಿಗೆ ಕಾರಣ. ಬೇರೆ ಪಕ್ಷಗಳ ಆಮಿಷಕ್ಕೆ ಬಲಿಯಾಗಿಲ್ಲ ಸಂಪೂರ್ಣ ಆಶೀರ್ವಾದ ದೊರೆಕಿದೆ. ಭಾವನಾತ್ಮಕ ಸಂಬಂಧದಿಂದ ಗೆದ್ದಿದ್ದೇವೆ. ಹಣಮುಖಾಂತರ ಗೆಲ್ಲಲು ಹೊರಟ ಬಿಜೆಪಿ ಕಥೆ ಏನಾಯಿತು ಎಂದು ಜಾಹೀರಾಗಿದೆ.
ಚನ್ನಪಟ್ಟಣದಲ್ಲಿ ಕಷ್ಟ ಇದ್ದದ್ದು ನಿಜ. ಆದರೆ ನಮ್ಮ ಪಕ್ಷದ ಕಾರ್ಯಕರ್ತರ ಆತ್ಮವಿಶ್ವಾಸ ಹೆಚ್ಚಿಸಿದೆ. ಕಣ್ಣೀರು ಸುರಿಸಿ ಸಿಂಪಥಿ ಓಟು ಗಿಟ್ಟಿಸುವ ಕೀಳುಮಟ್ಟದ ರಾಜಕೀಯ ಮಾಡಿದ್ದಾರೆ ಎಂದು ಏನು ನಮ್ಮ ಬಿಜೆಪಿ ಮಿತ್ರರು ಆರೋಪ ಮಾಡಿದ್ದಾರೆ ಅದಕ್ಕೆ ತಕ್ಕ ಉತ್ತರ ಫಲಿತಾಂಶದಲ್ಲಿ ಕಂಡುಬಂದಿದೆ. ಜನರ ನಡುವೆ ಬಾಂದವ್ಯಕ್ಕೆ ಯಾವ ನಟನೆ ಬೇಕಿಲ್ಲ ಗೋವಿಂದರಾಜನಗರದಲ್ಲಿ ಕಾಂಗ್ರೆಸ್ ಗೆಲ್ಲುವ ನಿರೀಕ್ಷೆಯಿದೆ ಹೇಳಿದರು.
11 ವರ್ಷ ಕ್ಷೇತ್ರದಲ್ಲಿ ಸಿಪಿ ಯೋಗಿಶ್ವರ್ ಮಾಡಿಕೊಂಡು ದಬ್ಬಾಳಿಕೆಗೆ ತಕ್ಕ ಶಾಸ್ತಿ ಆಗಿದೆ. ಅಭಿವೃದ್ಧಿಗಾಗಿ ಜನ ನನ್ನ ಗೆಲ್ಲಿಸಿದ್ದಾರೆ ಜನರ ವಿಶ್ಚಾಸಕ್ಕೆ ನಾನು ಋಣಿ ಎಂದು ಚನ್ನಪಟ್ಟಣದಲ್ಲಿ ಗೆದ್ದ ಎಂ ಸಿ.ಅಶ್ವಥ್ ಪ್ರತಿಕ್ರಿಯಿಸಿದ್ದಾರೆ. ಆರಂಭದಿಂದಲೂ ಭಾರಿ ಮುನ್ನಡೆ ಗಳಿಸಿ ಜೆಡಿಎಸ್ ನಲ್ಲಿ ಪ್ರಥಮವಾಗಿ ಗೆಲುವಿನ ನಗೆ ಮೂಡಿಸಿದ ರಾಮನಗರ ಅಭ್ಯರ್ಥಿ ಕೆ .ರಾಜು ಅವರು ತಮ್ಮ ಗೆಲುವನ್ನು ಕುಮಾರಸ್ವಾಮಿ ಅವರಿಗೆ, ಜನತೆಗೆ ಅರ್ಪಿಸಿದ್ದಾರೆ. ಸಾಮಾನ್ಯ ಕಾರ್ಯಕರ್ತನಾದ ನನ್ನ ಮೇಲೆ ವಿಶ್ವಾಸ ಇರಿಸಿದ ಗೌಡರ ಕುಟುಂಬಕ್ಕೆ ನಾನು ಚಿರಋಣಿ. ಜನತೆಯೊಡನೆ ಉತ್ತಮ ಬಾಂದವ್ಯ ಮೆರೆಯುವೆ ಎಂದಿದ್ದಾರೆ.
(ದಟ್ಸ್ ಕನ್ನಡವಾರ್ತೆ)











Click it and Unblock the Notifications