ಮುಖ್ಯಮಂತ್ರಿಗಳೆ ಬರಕ್ಕೆ ಭಯಬೀಳಬೇಡಿ : ಪಿಎಂ

ಬರಗಾಲವನ್ನು ಎದುರಿಸುವ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡೋಣ, ಇದಕ್ಕೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಕೇಂದ್ರ ಸರಕಾರದೊಂದಿಗೆ ಕೈಜೋಡಿಸಿ ಎಂದು ಮನವಿ ಮಾಡಿಕೊಂಡರು. ಆಂತರಿಕ ಭದ್ರತೆಗೆ ಸಂಬಂಧಿಸಿದಂತೆ ಎರಡು ದಿನಗಳ ಸಭೆ ಇಂದು ವಿವಿಝ ರಾಜ್ಯಗಳ ಪರಿಸರ ಖಾತೆ ಸಚಿವರೊಂದಿಗೆ ಬರಗಾಲದ ಕುರಿತು ಸುದೀರ್ಘ ಚರ್ಚೆ ನಡೆಯಿತು.
ಬರಗಾಲದಿಂದ ಆಹಾರ ಕೊರತೆ ಉಂಟಾಗುವ ಸಾಧ್ಯತೆ ಇದೆ. ಇದರಿಂದಾಗಿ ಕೇಂದ್ರ ಸರಕಾರ ಅಗತ್ಯ ಪ್ರಮಾಣದ ಗೋಧಿ ಮತ್ತು ಅಕ್ಕಿಯನ್ನು ಶೇಖರಣೆ ಮಾಡಿಕೊಳ್ಳಲಾಗಿದೆ. ಬರಗಾಲ ಭಾರತಕ್ಕೆ ಹೊಸದೇನಲ್ಲ. ಈಗಾಗಲೇ ಸಾಕಷ್ಟು ಬಾರಿ ಮಳೆ ಕೊರತೆಯನ್ನು ಎದುರಿಸಿದ್ದೇವೆ. ಸಮರ್ಥವಾಗಿ ಎದುರಿಸಿದ್ದೇವೆ. ಈಗಲೂ ಅಷ್ಟೆ ಎಲ್ಲರೂ ಒಂದಾಗಿ ಇದನ್ನು ಎದುರಿಸೋಣ. ಕೇಂದ್ರ ಸರಕಾರ ಅಗತ್ಯ ಸಹಾಯ ಸಹಕಾರಕ್ಕೆ ಸಿದ್ದ. ಜೊತೆಗೆ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಇನ್ನಷ್ಟು ಪರಿಣಾಮಕಾರಿ ಜಾರಿಗೊಳಿಸಲಾದಗುವುದು ಎಂದು ಸಿಂಗ್ ವಿವರಿಸಿದರು.
(ಏಜನ್ಸೀಸ್)












Click it and Unblock the Notifications