ಗೌರಿ-ಗಣೇಶ ನಿಯಮ ಪಾಲಿಸಿ, ಪೊಲೀಸ್
ಬೆಂಗಳೂರು, ಆ. 17 : ಗೌರಿ-ಗಣೇಶ ಹಬ್ಬದ ಹಿನ್ನಲೆಯಲ್ಲಿ ಸಾರ್ವಜನಿಕರು ಪಾಲಿಸಬೇಕಾದ ನಿಯಮಗಳನ್ನು ಪೊಲೀಸ್ ಇಲಾಖೆ ಪ್ರಕಟಿಸಿದೆ.
* ಸಾರ್ವಜನಿಕರು ಓಡಾಡುವ ರಸ್ತೆಗಳಲ್ಲಿ ಚಪ್ಪರ, ಶಾಮಿಯಾನ ಹಾಕಿ ಗಣೇಶನನ್ನು ಪ್ರತಿಷ್ಠಾಪಿಸಬಾರದು.
* ಪ್ರತಿಷ್ಠಾಪನೆಗೆ ಮುಂಚೆ ಪಾಲಿಕೆ, ಸಂಚಾರಿ ಪೊಲೀಸ್, ಬೆಸ್ಕಾಂ, ಅಗ್ನಿಶಾಮಕದಳ ಇಲಾಖೆಗಳಿಂದ NOC ಪಡೆದಿರಬೇಕು.
* ಬಲವಂತವಾಗಿ ವಂತಿಗೆ ವಸೂಲು ಮಾಡುವಂತಿಲ್ಲ.
* ಬೆಳಿಗ್ಗೆ 6ರಿಂದ ರಾತ್ರಿ 10ರ ವರೆಗೆ ಮಾತ್ರ ಧ್ವನಿವರ್ಧಕ ಬಳಸಬೇಕು.
* ರಾತ್ರಿ 10ರಿಂದ ಬೆಳಿಗ್ಗೆ 6 ಗಂಟೆಯ ವರೆಗೆ ಪಟಾಕಿ ಸಿಡಿಸುವುದು ನಿಷೇಧಿತ
* ಚಪ್ಪರ, ಶಾಮಿಯಾನ ಮತ್ತು ವಿಗ್ರಹ ರಕ್ಷಣೆಗೆ ಸ್ವಯಂಸೇವಕರನ್ನು ನೇಮಿಸಿಕೊಳ್ಳಬೇಕು.
* ವಿಗ್ರಹ ವಿಸರ್ಜನೆಯ ವೇಳೆ ಸ್ವಯಂ ಸೇವಕರನ್ನು ನೇಮಿಸಿಕೊಂಡು ಸ್ಥಳೀಯ ಪೊಲೀಸರಿಗೆ ಸಹಕರಿಸಬೇಕು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications