ಬರ ಪರಾಮರ್ಶೆ; ಪಿಎಂ ನೇತೃತ್ವದಲ್ಲಿ ಸಿಎಂಗಳ ಸಭೆ
ನವದೆಹಲಿ, ಆ.17: ದೇಶದಲ್ಲಿ ಮಳೆಗಾಲವಿಲ್ಲದೆ ಉದ್ಭವಿಸಿರುವ ಬರ, ಹಂದಿಜ್ವರ ಸೇರಿದಂತೆ ಪ್ರಮುಖ ವಿಷಯಗಳನ್ನು ಚರ್ಚಿಸಲು ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದಲ್ಲಿ ಇಂದು (ಆ. 17) ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಯಲಿದೆ.
ದೇಶವನ್ನೇ ತಲ್ಲಣಗೊಳಿಸಿರುವ ಹಂದಿಜ್ವರ ನಿಯಂತ್ರಣಕ್ಕೆ ರಾಜ್ಯ ಸರಕಾರ ಕೈಗೊಳ್ಳಬೇಕಾಗಿರುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಪ್ರಧಾನಿಯವರು ಮುಖ್ಯಮಂತ್ರಿಗಳಿಗೆ ಸಲಹೆ ಮತ್ತು ಸೂಚನೆ ನೀಡಲಿದ್ದಾರೆ. ಇದೇವೇಳೆ ನಕ್ಸಲೀಯರ ವಿರುದ್ಧ ಕ್ರಿಯಾಶೀಲ ಕ್ರಮ ಮತ್ತು ಮುಂಬೈ ಮೇಲಿನ ದಾಳಿಯ ಬಳಿಕದ ಭದ್ರತಾ ಪರಿಸ್ಥಿತಿ ಕುರಿತು ಪರಾಮರ್ಶೆ ನಡೆಯಲಿದೆ.
ರಾಜ್ಯ ಸರಕಾರಗಳು ಪ್ರತಿಯೊಂದಕ್ಕೂ ಕೇಂದ್ರದ ನೆರವನ್ನು ನಿರೀಕ್ಷಿಸದೆ, ಇರುವ ಆರ್ಥಿಕ ಸಂಪನ್ಮೂಲದಲ್ಲೇ ಆಹಾರ ಉತ್ಪನ್ನಗಳನ್ನು ಜನತೆಗೆ ವಿತರಿಸುವುದು, ಬರ ಪರಿಹಾರದ ಸಂದರ್ಭದಲ್ಲಿ ಕೇಂದ್ರದ ಯೋಜನೆಯನ್ನು ಸಮರ್ಪಕವಾಗಿ ಬಳಸುವಂತೆ ಸಲಹೆ ನೀಡಲಿದ್ದಾರೆಂದು ತಿಳಿದು ಬಂದಿದೆ.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications