ಎಚ್ಡಿಕೆ ಋಣ ತೀರಿಸಿ: ಮಾಜಿ ಪ್ರಧಾನಿ ದೇವೇಗೌಡ

ಈ ಭಾಗದ ರೈತರ ಪರ ಲೋಕಸಭೆಯಲ್ಲಿ ಸಮರ್ಪಕವಾಗಿ ಧ್ವನಿ ಎತ್ತ ಬೇಕಾದರೆ ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಎಚ್ ಡಿ ಕುಮಾರಸ್ವಾಮಿ ಅವರ ಕೈ ಬಲಪಡಿಸಿ. ಬಡವರ ಮತ್ತು ರೈತರ ಪರವಾಗಿರುವ ನಮ್ಮ ಪಕ್ಷದ ಅಬ್ಯರ್ಥಿಯನ್ನು ಬೆಂಬಲಿಸಿ ಎಂದರು.
ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಯಡಿಯೂರಪ್ಪ ಗದ್ದುಗೆ ಏರಿದ ಕೆಲವೇ ದಿನಗಳಲ್ಲಿ ಗೊಬ್ಬರ ಕೇಳಲು ಹೋದ ರೈತನಿಗೆ ಗುಂಡಿಕ್ಕಿಸಿ ರೈತ ವಿರೋಧಿತನವನ್ನು ಬಿಂಬಿಸಿದರು. ರೈತ ವಿರೋಧಿ ಈ ಸರಕಾರವನ್ನು ಬಗ್ಗು ಬಡಿಯಲು ಕ್ಷೇತ್ರದಲ್ಲಿನ ನಮ್ಮ ಅಬ್ಯರ್ಥಿಗೆ ಮತನೀಡಿ ಎಂದು ದೇವೇಗೌಡ ಕರೆಕೊಟ್ಟಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications