ಅಂಕ ನೀಡಲು ಲಂಚ ಪಡೆದು ಲೋಕಾಯುಕ್ತರ ಬಲೆಗೆ ಬಿದ್ದ

ನರಗುಂದ ಸರ್ಕಾರಿ ಐಟಿಐ ಕಾಲೇಜಿನ ಪ್ರಾಂಶುಪಾಲನಾಗಿರುವ ಎನ್.ಡಿ. ಅಲಗುಂದಿ ಶಿವಮೊಗ್ಗ ಜಿಲ್ಲೆಯ ಐಟಿಐ ಪರೀಕ್ಷಾ ಮುಖ್ಯಸ್ಥನಾಗಿ ನೇಮಕಗೊಂಡಿದ್ದರು. ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಕೊಡಿಸುವ ಆಮಿಷವೊಡ್ಡಿ ಅವರಿಂದ ಒಟ್ಟು 30,600 ರು. ಲಂಚವಾಗಿ ಪಡೆಯುವಾಗ ಮಂಗಳವಾರ ಶಿವಮೊಗ್ಗ ಲೋಕಾಯುಕ್ತ ಇನ್ಸ್ಪೆಕ್ಟರ್ ಕರಿಬಸವನ ಗೌಡ ಮತ್ತು ಸಿಬ್ಬಂದಿಗಳು ದಾಳಿ ಮಾಡಿ ಬಂಧಿಸಿದ್ದಾರೆ.
ಬೆಳಿಗ್ಗೆ ನಗರದ ಬಿ.ಹೆಚ್. ರಸ್ತೆಯಲ್ಲಿ ಜೂನಿಯರ್ ಟ್ರೈನಿಂಗ್ ಆಫಿಸರ್ ಆಗಿರುವ ಇರ್ಫಾನ್ ಬೇಗ್ ವಿದ್ಯಾರ್ಥಿಗಳ ಹಣವನ್ನು ಎನ್.ಡಿ. ಅಲಗುಂದಿಗೆ ನೀಡುವಾಗ ಈ ದಾಳಿ ಮಾಡಲಾಗಿದೆ. ಐಟಿಐ ಪರೀಕ್ಷೆಗಳು ನಡೆಯುತ್ತಿದ್ದು, ಈ ಪರೀಕ್ಷಾ ಮುಖ್ಯಸ್ಥನಾಗಿ ಅಲಗುಂದಿ ನರಗುಂದ ಸರ್ಕಾರಿ ಐಟಿಐ ಕಾಲೇಜಿನ ಪ್ರಾಂಶುಪಾಲ ಹುದ್ದೆಯ ಆಧಾರದ ಮೇಲೆ ನೇಮಕಗೊಂಡಿದ್ದ. ಪರೀಕ್ಷೆಗಳ ಸಂದರ್ಭದಲ್ಲಿ ಪರಿಚಯವಾದ ವಿದ್ಯಾರ್ಥಿಗಳಿಗೆ ಗುಪ್ತವಾಗಿ ಕರೆದು, ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಬೇಕಾದರೆ 1800 ರು. ನೀಡಬೇಕು. ಹಣ ನೀಡಿದರೆ, ಹೆಚ್ಚಿನ ಅಂಕ ಪಡೆಯಲು ಸಾಧ್ಯ ಎಂದೆಲ್ಲಾ ಹೇಳಿ, ತನ್ನ ಕೈಕೆಳಗಿನ ಜೂನಿಯರ್ ಟ್ರೈನಿಂಗ್ ಆಫಿಸರ್ ಆಗಿರುವ ಇರ್ಫಾನ್ ಬೇಗ್ರವರಿಗೆ ಹಣ ಸಂಗ್ರಹಿಸಲು ಆದೇಶಿಸಿದ್ದ.
18 ವಿದ್ಯಾರ್ಥಿಗಳಿಂದ ಹಣ ಸಂಗ್ರಹಿಸಿದ ಇರ್ಫಾನ್ ಬೇಗ್ ನೇರವಾಗಿ ಪರೀಕ್ಷಾ ಮುಖ್ಯಸ್ಥ ಎನ್.ಡಿ. ಅಲಗುಂದಿಗೆ ನೀಡದೇ, ನೇರವಾಗಿ ಲೋಕಾಯುಕ್ತ ಪೊಲೀಸರಿಗೆ ಲಿಖಿತ ದೂರು ನೀಡಿದರು. 30,600 ರು. ಅಲಗುಂದಿಗೆ ನೀಡುವಂತೆ ಲೋಕಾಯುಕ್ತ ಪೊಲೀಸರು ಸೂಚಿಸಿದ ನಂತರ ಇರ್ಫಾನ್ ಬೇಗ್ರವರು ಅಲಗುಂದಿಯವರನ್ನು ಬಿ.ಹೆಚ್. ರಸ್ತೆಗೆ ಬರಲು ತಿಳಿಸಿದರು. ಇರ್ಫಾನ್ ಬೇಗ್ ಕರೆಯ ಮೇರೆಗೆ ಬಂದ ಅಲಗುಂದಿ ಕೈಗೆ ಲಂಚದ ಹಣ ನೀಡುವಾಗ ಕರಿಬಸವನಗೌಡ ನೇತೃತ್ವದ ಲೋಕಾಯುಕ್ತ ತಂಡ ರಸ್ತೆಯಲ್ಲಿಯೇ ಅಲಗುಂದಿಯನ್ನು ಬಂಧಿಸಿತು. ನಂತರದಲ್ಲಿ ತನಿಖೆಗೆಂದು ಪಕ್ಕದಲ್ಲಿಯೇ ಇದ್ದ ಹೊಟೇಲ್ ಸಾಮ್ರಾಟ್ ಅಶೋಕಕ್ಕೆ ಕರೆದೊಯ್ದಿತು.
ಎನ್.ಡಿ. ಅಲಗುಂದಿಯನ್ನು ಬಂಧಿಸಿರುವ ಲೋಕಾಯುಕ್ತ ಪೊಲೀಸರು ಆತನನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಿದರು.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications