ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕರವೇ ಹೊಟ್ಟೆಪಾಡಿನ ಸಂಘಟನೆ
ಗೋಣಿಕೊಪ್ಪಲು ಆ 10: ತಿರುವಳ್ಳುವರ್ ಪ್ರತಿಮೆ ಅನಾವರಣಕ್ಕೆ ವಿರೋಧ ವ್ಯಕ್ತಪಡಿಸಿರುವ ಕರ್ನಾಟಕ ರಕ್ಷಣಾ ವೇದಿಕೆಯ ಎರಡೂ ಬಣಗಳು ಹೊಟ್ಟೆಪಾಡಿಗಾಗಿ ಇರುವ ಸಂಘಟನೆ ಎಂದು ಹಿರಿಯ ರಾಜಕಾರಿಣಿ ಎ ಕೆ ಸುಬ್ಬಯ್ಯ ಲೇವಡಿ ಮಾಡಿದ್ದಾರೆ.
ರಾಜಕಾರಣ ಮತ್ತು ವೈಚಾರಿಕತೆಯ ಸವಾಲುಗಳು ಎನ್ನುವ ವಿಷಯದ ಕುರಿತು ಮಾತನಾಡುತ್ತಾ, ತಮಿಳು ಕವಿ ತಿರುವಳ್ಳವರ್ ಪ್ರತಿಮೆಯನ್ನು ಬೆಂಗಳೂರಿನಲ್ಲಿ ಸ್ಥಾಪನೆ ಮಾಡುವ ಮೂಲಕ ರಾಜ್ಯದಲ್ಲಿ ಸರ್ವರಿಗೂ ಸಮಾನ ಪ್ರಾತಿನಿಧ್ಯ ನೀಡುವ ಸಂದೇಶ ನೀಡಲಾಗಿದೆ, ಸರಕಾರದ ಈ ಕ್ರಮ ಸ್ವಾಗತಾರ್ಹ ಎಂದು ಸುಬ್ಬಯ್ಯ ಹೇಳಿದ್ದಾರೆ.
ಕರವೇಯ ಎರಡೂ ಬಣಗಳು ಈ ವಿಷಯದಲ್ಲಿ ನಡೆಸಿದ ಹೋರಾಟಕ್ಕೆ ನನ್ನ ಬೆಂಬಲವಿಲ್ಲ. ಎಲ್ಲಾ ಸಾಹಿತಿಗಳು ರಾಜಕೀಯ ಪಕ್ಷಗಳು ಪ್ರತಿಮೆ ಅನಾವರಣಕ್ಕೆ ಬೆಂಬಲಿಸಿದರೆ ಕನ್ನಡ ಸಂಘಟನೆಗಳು ಮಾತ್ರ ವಿರೋಧಿಸುತ್ತಿದ್ದನ್ನು ನೋಡಿದರೆ ಕರವೇ ಹೊಟ್ಟೆಪಾಡಿಗಾಗಿರುವ ಸಂಘಟನೆ ಎಂದು ಹೇಳಬೇಕಾಗುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.
(ದಟ್ಸ್ ಕನ್ನಡವಾರ್ತೆ)
ಕರವೇ kannada karnataka rakshana vedike ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ತಮಿಳು ak subbaiah karave ತಿರುವಳ್ಳುವರ್ tamil tiruvalluvar koppal
Story first published: Monday, August 10, 2009, 12:03 [IST]