3000ಮಠಕ್ಕೆ ಉತ್ತರಾಧಿಕಾರಿ ಸದ್ಯಕ್ಕಿಲ್ಲ

ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿಯವರಿಗೆ ಎಲ್ಲ ರೀತಿಯ ಸಹಕಾರ ನೀಡು ವುದಾಗಿ ಸಭೆಯಲ್ಲಿ ಪಾಲ್ಗೊಂಡಿದ್ದ ಜನಪ್ರತಿನಿಧಿಗಳು ಹಾಗೂ ಭಕ್ತರು ಭರವಸೆ ನೀಡಿದರು. ವಿಧಾನಸಭಾಧ್ಯಕ್ಷ ಜಗದೀಶ ಶೆಟ್ಟರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶ್ರೀಮಠಕ್ಕೆ ಉತ್ತರಾಧಿಕಾರಿಯನ್ನು ನೇಮಿಸುವ ವಿಚಾರ ಇಲ್ಲಿಗೇ ಕೈಬಿಡುವಂತೆ ಮಾಡಿ ಕೊಂಡ ಮನವಿಗೆ ಶ್ರೀಗಳು ಅಸ್ತು' ಎಂದದ್ದು ಭಕ್ತ ಸಮೂಹಕ್ಕೆ ಸಂತಸ ತಂದಿತು.
ಸಭೆಯಲ್ಲಿ ಮಾತನಾಡಿದ ಶೆಟ್ಟರ್, ವಿವಾದಕ್ಕೆ ಸಂಬಂಧಿಸಿ ಹಾಲಿ ಜಗದ್ಗುರುಗಳು ಹಾಗೂ ರುದ್ರಮುನಿದೇವರು ಮಧ್ಯೆ ನಡೆದಿದ್ದ ಕಾನೂನು ಸಮರ ಇತ್ತೀಚಿಗಷ್ಟೆ ರಾಜಿ ಸಂಧಾನದ ಮೂಲಕ ಬಗೆಹರಿದಿದ್ದು, ಮಠ ದಲ್ಲಿ ವಾತಾವರಣ ತಿಳಿಯಾಗಿದೆ. ಹೀಗಿರುವಾಗ ಮತ್ತೆ ಉತ್ತರಾಧಿಕಾರಿ ನೇಮಿಸುವುದು ಮಠದ ಹಿತದೃಷ್ಟಿಯಿಂದ ಸರಿಯಲ್ಲ ಎಂದರು.
ಗುರುಸಿದ್ಧ ರಾಜ ಯೋಗೀಂದ್ರ ಸ್ವಾಮೀಜಿ, ತೋಂಟದ ಸಿದ್ಧಲಿಂಗ ಸ್ವಾಮೀಜಿ, ಶಿರಹಟ್ಟಿಯ ಫಕ್ಕೀರಸಿದ್ರಾಮ ಸ್ವಾಮೀಜಿ, ಬಸವರಾಜ ಹೊರಟ್ಟಿ, ವಿಧಾನಪರಿಷತ್ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಲೋಕೋಪಯೋಗಿ ಸಚಿವ ಸಿ.ಎಂ. ಉದಾಸಿ, ಚಂದ್ರ ಕಾಂತ ಬೆಲ್ಲದ, ಮೇಯರ್ ವೀರಣ್ಣ ಸವಡಿ, ಎಸ್.ಎಸ್. ಶೆಟ್ಟರ್ ಪಾಲ್ಗೊಂಡಿದ್ದರು.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications