ಗುಡಿಸಲಿಗೆ ಬೆಂಕಿ : 3 ಮಕ್ಕಳು ಸಜೀವ ದಹನ
ಬೆಂಗಳೂರು, ಆ. 4 : ಆಕಸ್ಮಿಕವಾಗಿ ಬೆಂಕಿ ಹತ್ತಿದ್ದರಿಂದ ಗುಡಿಸಲಿನಲ್ಲಿದ್ದ ಮೂವರು ಮಕ್ಕಳು ಸಜೀವ ದಹನವಾಗಿರುವ ದಾರುಣ ಘಟನೆ ನಗರದ ರಾಮಮೂರ್ತಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ವಿಜಿನಾಪುರದಲ್ಲಿ ಮಂಗಳವಾರ ಮಧ್ಯಾಹ್ನ 12 ಗಂಟೆ ಹೊತ್ತಿಗೆ ನಡೆದಿದೆ.
ಕಳೆದ ಎರಡು ವರ್ಷಗಳಿಂದ ಸಬೀತಾ ಎಂಬ ಮಹಿಳಾ ರಾಮಮೂರ್ತಿನಗರದ ವಿಜಿನಾಪುರದ ಗುಡಿಸಲಿನಲ್ಲಿ ವಾಸವಾಗಿದ್ದರು. ಒಂಟಿ ಮಹಿಳೆಯಾಗಿದ್ದ ಅವರು, ಕೆಲಸಕ್ಕೆ ಹೋಗುವಾಗ ಮಕ್ಕಳನ್ನು ಗುಡಿಸಲಿನ ಒಳಗೆ ಇರಿಸಿ ಬೀಗ ಹಾಕಿಕೊಂಡು ಹೋಗುತ್ತಿದ್ದರು. ಎಂದಿನಂತೆ ಇಂದು ಕೂಡಾ ಮಕ್ಕಳು ಗುಡಿಸಲಿನ ಒಳಗೆ ಹಾಕಿ ಕೆಲಸಕ್ಕೆ ಹೋಗಿದ್ದಾರೆ. ಆದರೆ, ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಗುಡಿಸಲಿನಲ್ಲಿದ್ದ ಮೂರು ಮಕ್ಕಳು ಸಜೀವ ದಹನವಾಗಿದ್ದಾರೆ.
ಆದರೆ, ಕೆಲಸಕ್ಕೆ ಹೋಗಿರುವ ಸಬೀತಾಗೆ ಮಕ್ಕಳು ದಾರುಣ ಸಾವಿನ ವಿಷಯವಿನ್ನೂ ತಿಳಿದಿಲ್ಲ. ಅವರು ಸ್ಥಳಕ್ಕೆ ಬಂದ ನಂತರ ಘಟನೆ ಬಗ್ಗೆ ಸ್ಪಷ್ಟ ಚಿತ್ರಣ ದೊರೆಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ರಾಮಮೂರ್ತಿನಗರದ ಪೊಲೀಸರು ಆಗಮಿಸಿ, ತನಿಖೆ ಕೈಗೊಂಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)