ಸರಕಾರದ ವಿರುದ್ಧ ಗರಂ ಆದ ಆಯೋಗ
ಬಳ್ಳಾರಿ, ಆ. 4 : ಸರಕಾರದಲ್ಲಿ ಉ೦ಟಾಗಿದ್ದ ಭಿನ್ನಮತ ತಣಿಸಲು ರಾಜ್ಯ ಸಚಿವ ಸ೦ಪುಟ ಬಳ್ಳಾರಿ ಗಣಿಧಣಿಗಳ ವಿರುದ್ದ ಇದ್ದ ಕ್ರಿಮಿನಲ್ ಮೊಕದ್ದಮೆ ವಾಪಾಸ್ ಪಡೆದ ಕ್ರಮಕ್ಕೆ ರಾಜ್ಯ ಚುನಾವಣಾ ಆಯೋಗ ಕಿಡಿಕಾರಿದ್ದು, ಬಳ್ಳಾರಿ ಜೆ ಎಂ ಎಫ್ ಸಿ ನ್ಯಾಯಾಲಯದಲ್ಲಿ ತಕರಾರು ಅರ್ಜಿ ಸಲ್ಲಿಸುವ ಮೂಲಕ ಸರಕಾರದ ನಿರ್ಧಾರದ ವಿರುದ್ದ ಚುನಾವಣಾ ಆಯೋಗ ಸಮರ ಸಾರಿದೆ.
ಕೇ೦ದ್ರ ಚುನಾವಣಾ ಆಯೋಗ ಕೂಡಾ ಸರಕಾರದ ಈ ನೀತಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಮು೦ದೆ ನ್ಯಾಯ ಸಮ್ಮತ ಚುನಾವಣೆ ನಡೆಸುವ ದೃಷ್ಟಿಯಿಂದ ಈಗಾಗಲೇ ಆಯೋಗ ಹೂಡಿರುವ ಪ್ರಕರಣಗಳನ್ನು ಹಿ೦ಪಡೆಯುವುದನ್ನು ಸಹಿಸುವುದಿಲ್ಲ ಎ೦ದು ಹೇಳಿ, ಸರಕಾರದ ನಿರ್ಧಾರವನ್ನು ಪ್ರಶ್ನಿಸುವ೦ತೆ ರಾಜ್ಯ ಚುನಾವಣಾ ಆಯೋಗಕ್ಕೆ ಆದೇಶ ನೀಡಿತ್ತು.
ಕಳೆದ ವಿಧಾನಸಭಾ ಚುನಾವಣೆಯ ಸ೦ದರ್ಭದಲ್ಲಿ ಬಳ್ಳಾರಿ ತ್ರಿಮೂರ್ತಿ ರೆಡ್ದಿ ಸಹೋದರರು ಮತ್ತು ಶ್ರೀರಾಮುಲು ವಿರುದ್ದ ಸುಮಾರು 16 ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿತ್ತು. ಆನ೦ತರ ಈ ನಾಲ್ವರು ಶಾಸಕರು ಬಿಜೆಪಿ ಭಿನ್ನಮತೀಯ ತ೦ಡದಲ್ಲಿ ಗುರುತಿಸಿಕೊಂಡಿದ್ದರಿಂದ ಇವರನ್ನು ಒಲೈಸಲು ಯಡಿಯೂರಪ್ಪ ಸರಕಾರ ಸಾಕ್ಷ್ಯಾಧಾರಗಳ ಕೊರತೆಯಿದೆ ಎ೦ದು ನೆಪ ನೀಡಿ ಎಲ್ಲಾ ಪ್ರಕರಣಗಳನ್ನು ಹಿ೦ದಕ್ಕೆ ಪಡೆದಿತ್ತು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications