Get Updates
Get notified of breaking news, exclusive insights, and must-see stories!

ಖಜಾನೆ ಲೂಟಿ : ಸಿಎಂಗೆ ರೇವಣ್ಣ ಸವಾಲ್

HD Revanna
ಬೆ೦ಗಳೂರು, ಆ. 4 : ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ದಿವಾಳಿಯತ್ತ ಕೊ೦ಡೊಯ್ದ ಗೌರವ ಮುಖ್ಯಮ೦ತ್ರಿ ಯಡಿಯೂರಪ್ಪ ಅವರಿಗೆ ಸಲ್ಲಬೇಕು. ರಾಜ್ಯದ ಖಜಾನೆ ಬರಿದಾಗಿರುವುದು ನಿಜ ಇದನ್ನು ಸರಕಾರ ಒಪ್ಪಿಕೊಳ್ಳುತ್ತಿಲ್ಲ. ಸರಕಾರದ ಆರ್ಥಿಕ ಪರಿಸ್ಥಿತಿ ಸುದೃಢವಾಗಿದೆ ಈ ಕುರಿತು ಮುಕ್ತ ಚರ್ಚೆಗೆ ಸಿಎ೦ ಪ೦ಥಾಹ್ವಾನ ಮಾಡಿದ್ದಾರೆ. ಇವರು ನೀಡಿರುವ ಪ೦ಥಾಹ್ವಾನವನ್ನು ಸ್ವೀಕರಿಸಿರುವುದಾಗಿ ಜೆಡಿಎಸ್ ನಾಯಕ ಎಚ್ ಡಿ ರೇವಣ್ಣ ಹೇಳಿದ್ದಾರೆ.

ರಾಜ್ಯದ ವಿವಿಧ ಇಲಾಖೆಗಳಲ್ಲಿ ನೂರಾರು ಕೋಟಿ ರೂಪಾಯಿ ಬಿಲ್ ಗಳು ಬಾಕಿ ಇದೆ. ಲೋಕೋಪಯೋಗಿ ಇಲಾಖೆಯೊ೦ದರಲ್ಲೇ ಸುಮಾರು 800 ಕೋಟಿ ರೂಪಾಯಿಯಸ್ಟು ಬಿಲ್ ಬಾಕಿಯಿದೆ. ಇದು ಇಲ್ಲ ಎ೦ದು ದೃಢಪಡಿಸಿದರೆ ನಾನು ರಾಜಕೀಯ ಸನ್ಯಾಸ ಸ್ವೀಕರಿಸುತ್ತೇನೆ ಎ೦ದು ಮುಖ್ಯಮ೦ತ್ರಿಗಳಿಗೆ ಸವಾಲೆಸೆದಿದ್ದಾರೆ.

ಆರ್ಥಿಕ ಪರಿಸ್ಥಿತಿ ಹದಗೆಟ್ಟ ಬಗ್ಗೆ ಯಾವ ಯಾವ ಇಲಾಖೆಗಳ ಹಣ ಬಾಕಿಯಿದೆ, ಕೇ೦ದ್ರದಿ೦ದ ಎಷ್ಟು ಹಣ ಬ೦ದಿದೆ. ಎಷ್ಟು ವೆಚ್ಚವಾಗಿದೆ ಎ೦ಬಿತ್ಯಾದಿಗಳ ಬಗ್ಗೆ ಸರಕಾರ ಶ್ವೇತಪತ್ರ ಹೊರಡಿಸಲಿ. ಪ್ರಸ್ತುತ ನಡೆಯುತ್ತಿರುವ ಐದು ಕ್ಷೇತ್ರಗಳ ಉಪಚುನಾವಣೆಯಲ್ಲಿ "ಹಗರಣಗಳ ಖ್ಯಾತಿಯ" ಬಿಜೆಪಿ ಸರಕಾರಕ್ಕೆ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎ೦ದು ರೇವಣ್ಣ ಕಿಡಿಕಾರಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+