ಇನ್ಫಿ ಆವರಣದಲ್ಲಿ ಬಂದೂಕುಧಾರಿಗಳ ಕಲರವ

ಇನ್ಫೋಸಿಸ್ ಆವರಣದಲ್ಲಿ ನಾಳೆಯಿಂದ (ಶುಕ್ರವಾರ) ತರಬೇತಿ ಹೊಂದಿದ ಸಿಐಎಸ್ಎಫ್ ಯೋಧರು ಕಾರ್ಯನಿರ್ವಹಿಸಲಿದ್ದಾರೆ. 101 ವಿಶೇಷ ತರಬೇತಿ ಪಡೆದು ಕಮಾಂಡೋಗಳನ್ನು ನಿಯೋಜಿಸಲಾಗುವುದು ಎಂದು ಕೇಂದ್ರ ಸರಕಾರ ತಿಳಿಸಿದೆ. ಮುಂಬೈನ ಭಯೋತ್ಪಾದನೆ ನಡೆದ ನಂತರ ಭಾರತದ ಪ್ರತಿಷ್ಠಿತ ಸಾಫ್ಟ್ ವೇರ್ ಸಂಸ್ಥೆಗಳ ಮೇಲೆ ಉಗ್ರರು ದಾಳಿ ನಡೆಸುವ ಸಾಧ್ಯತೆ ಇದೆ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿತ್ತು. ಇದರಿಂದ ಇನ್ಫೋಸಿಸ್ ಸೇರಿ ವಿವಿಧ ಪ್ರತಿಷ್ಠಿತ ಕಂಪನಿಗಳು ಭದ್ರತೆ ನೀಡುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದವು. ಇದಕ್ಕೆ ಸ್ಪಂದಿಸಿದ್ದ ಅಂದಿನ ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್, ಶೀಘ್ರದಲ್ಲಿ ಭದ್ರತೆ ಒದಗಿಸುವ ಭರವಸೆ ನೀಡಿದ್ದರು.
ಸಾರ್ವಜನಿಕ ಕಂಪನಿಗಳಿಗೆ ಮಾತ್ರ ಸಿಐಎಸ್ಎಫ್ ಭದ್ರತೆಯನ್ನು ಒದಗಿಸಲಾಗುತ್ತಿತ್ತು. ಉಗ್ರರ ಉಪಟಳ ಹೆಚ್ಚಿದ್ದರಿಂದ ಪ್ರತಿಷ್ಠಿತ ಖಾಸಗಿ ಕಂಪನಿಗಳಿಗೂ ಭದ್ರತೆ ಒದಗಿಸಲು ಕೇಂದ್ರ ನಿರ್ಧರಿಸಿತು. ಕಳೆದ ವರ್ಷ ಬೆಂಗಳೂರು ಸರಣಿ ಬಾಂಬ್ ಸ್ಫೋಟದಿಂದ ಬೆಂಗಳೂರಿನ ಜನತೆ ತಲ್ಲಣಗೊಂಡಿತ್ತು. ಆಗ ನಗರದಲ್ಲಿರುವ ಸಾಫ್ಟ್ ವೇರ್ ಕಂಪನಿಗಳಿಗೆ ಭದ್ರತೆ ನೀಡಬೇಕು ಎಂಬ ಕೂಗು ಹೆಚ್ಚಾಗಿದ್ದರಿಂದ ಕೇಂದ್ರ ಭದ್ರತೆ ನೀಡಲು ಒಪ್ಪಿಕೊಂಡಿತ್ತು. ಜುಲೈ 23 ರಂದು ಈ ಬಗ್ಗೆ ಅಧಿಕೃತ ಅನುಮೋದನೆ ದೊರೆತಿದ್ದು, ಜಾಮನಗರದಲ್ಲಿರುವ ರಿಲೈಯನ್ಸ್ ರಿಫೈನರಿ ಮತ್ತು ಇನ್ಫೋಸಿಸ್ ಕಂಪನಿಗಳು ಸಿಐಎಸ್ಎಫ್ ಭದ್ರತೆ ಪಡೆದು ಪ್ರಥಮ ಖಾಸಗಿ ಕಂಪನಿಗಳಾಗಿವೆ.
(ಏಜನ್ಸೀಸ್)












Click it and Unblock the Notifications