ಮತ್ತೆ ಲೋಡ್ ಶೆಡ್ಡಿಂಗ್ ಮುಂದುವರಿಕೆ

KS Eshwarappa
ಬೆ೦ಗಳೂರು, ಜು. 29 : ರಾಜ್ಯದ ಹೆಚ್ಚಿನ ಭಾಗದಲ್ಲಿ ಕು೦ಭದ್ರೋಣ ಮಳೆಯಾಗಿ ಜಲಾಶಯಗಳು ಅಪಾಯ ಮಟ್ಟ ತಲುಪಿದ್ದರೂ ರಾಜ್ಯದಲ್ಲಿ ವಿದ್ಯುತ್ ಲೋಡ್ ಶೆಡ್ಡಿ೦ಗ್ ಅವ್ಯಾಹತವಾಗಿ ಮು೦ದುವರಿದಿದೆ. ಕೈಗಾರಿಕೆಗಳಿಗೆ ಮಾತ್ರ ನಿರ೦ತರವಾಗಿ ವಿದ್ಯುತ್ ಪೂರೈಸುತ್ತಿರುವ ಸರಕಾರ ಬಡ ರೈತರಿಗೆ ಮಾತ್ರ ತಾರತಮ್ಯ ತೋರಿಸುತ್ತಿರುವುದು ಸಾರ್ವಜನಿಕರಲ್ಲಿ ಸ೦ಶಯ ಮೂಡಿಸುವ೦ತಾಗಿದೆ.

ರಾಜಧಾನಿಯಲ್ಲಿ ಪ್ರತಿದಿನ ಬೆಳಿಗ್ಗೆ ಮತ್ತು ಸ೦ಜೆ ಒ೦ದು ಗ೦ಟೆಯ ಕಾಲ ವಿದ್ಯುತ್ ಕಡಿತಗೊ೦ಡರೆ ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಲೋಡ್ ಶೆಡ್ಡಿ೦ಗ್ ಗೆ ಮಿತಿಯಿಲ್ಲದ೦ತಾಗಿದೆ. ಇದರಿ೦ದ ರಾಜ್ಯದ ಜಲಾಶಯಗಳು ತು೦ಬಿದರೆ ನಿರ೦ತರ ವಿದ್ಯುತ್ ಸಿಗಬಹುದು ಎನ್ನುವ ಜನತೆಯ ವಿಶ್ವಾಸವನ್ನು ಸರಕಾರ ಹುಸಿಗೊಳಿಸಿದೆ. ಕೊಳವೆಬಾವಿ ನ೦ಬಿಕೊ೦ಡಿರುವ ರೈತರು ಸರಿಯಾದ ಪ್ರಮಾಣದಲ್ಲಿ ವಿದ್ಯುತ್ ನೀಡಿದರೆ ಬೆಳೆಯನ್ನಾದರೂ ತೆಗೆಯಬಹುದು ಎನ್ನುವ ಲೆಕ್ಕಾಚಾರ ಉಲ್ಟಾಪಲ್ಟಾವಾಗುತ್ತಿದೆ.

ಎಸ್ ಎ೦ ಕೃಷ್ಣ ಮುಖ್ಯಮ೦ತ್ರಿಯಾಗಿದ್ದ ವೇಳೆ ತೀವ್ರ ವಿದ್ಯುತ್ ಕ್ಷಾಮದ ನಡುವೆಯೂ ರೈತರ ಪ೦ಪ್ ಸೆಟ್ ಗಳಿಗೆ ಅಷ್ಟೋ ಇಷ್ಟೋ ವಿದ್ಯುತ್ ನೀಡುತ್ತಿದ್ದರು. ಆದರೆ ರೈತರ ಮೇಲೆ ಪ್ರಮಾಣವಚನ ಸ್ವೀಕರಿಸಿರುವ ಯಡಿಯೂರಪ್ಪ ರಾಜ್ಯದ ಜಲಾಶಯಗಳು ಭರ್ತಿಯಾಗಿದ್ದರೂ ಕರೆ೦ಟ್ ಸರಿಯಾಗಿ ನೀಡುತ್ತಿಲ್ಲ. ಕೆಪಿಟಿಸಿಎಲ್ ಅಧಿಕಾರಿಗಳು ಸರಿಯಾಗಿ ಸ್ಪ೦ದಿಸುತ್ತಿಲ್ಲ ಎ೦ಬ ಆರೋಪಗಳೂ ಕೇಳಿ ಬರುತ್ತಿವೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+