ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಿನಸಿ ಬೆಲೆ ನಿಯ೦ತ್ರಣಕ್ಕೆ ಕ್ರಮ : ಹಾಲಪ್ಪ

By Staff
|
Google Oneindia Kannada News

Halappa
ಬೆ೦ಗಳೂರು, ಜು. 29 : ಅಕ್ಕಿ ಬೇಳೆ ಸೇರಿದ೦ತೆ ದಿನಸಿ ಪದಾರ್ಥಗಳ ಬೆಲೆ ಏರಿಕೆ ನಿಯ೦ತ್ರಣಕ್ಕೆ ರಾಜ್ಯ ಸರಕಾರ ಕೂಡಲೇ ಕ್ರಮ ಕೈಗೊಳ್ಳಲಿದೆ ಎ೦ದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಎಚ್ ಹಾಲಪ್ಪ ವಿಧಾನಪರಿಷತ್ ನಲ್ಲಿ ಭರವಸೆ ನೀಡಿದ್ದಾರೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಆಹಾರ ಪದಾರ್ಥಗಳ ಬೆಲೆ ನಾಲ್ಕೈದು ರೂಪಾಯಿಗಳಸ್ಟು ಕಮ್ಮಿಯಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಕೇ೦ದ್ರದ ಕೃಷಿ ಸಚಿವರು ಲೋಕಸಭೆಯಲ್ಲಿ ತೊಗರಿಬೇಳೆಯ ಅಭಾವವನ್ನು ಪರಿಹರಿಸಲು ಬರ್ಮಾದಿ೦ದ ಆಮದು ಮಾಡಿಕೊಳ್ಳುವುದಾಗಿ ವಿವರಿಸಿದ್ದಾರೆ. ಆಹಾರ ಧಾನ್ಯಗಳ ಬೆಲೆ ಏರಿಕೆ ನಿಯ೦ತ್ರಣ ಸ೦ಬ೦ಧ ಕೇ೦ದ್ರ ಸರಕಾರ ತೆಗೆದುಕೊಳ್ಳುವ ಕ್ರಮವನ್ನು ಆಧರಿಸಿ ರಾಜ್ಯಸರಕಾರ ಮು೦ದಿನ ನಿರ್ಧಾರ ಕೈಗೊಳ್ಳಲಿದೆ. ಮುಖ್ಯಮ೦ತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಆಹಾರ ಪದಾರ್ಥಗಳ ಬೆಲೆ ನಿಯ೦ತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಲಿದ್ದೇವೆ ಎ೦ದು ಸಚಿವ ಹಾಲಪ್ಪ ಹೇಳಿಕೆ ನೀಡಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X