ಆಗಸ್ಟ್ 1 : ಸಮಾಜ ಸೇವಕರ ದಿನಾಚರಣೆ
ಬೆಂಗಳೂರು, ಜು. 27 : ಬಸವನಗುಡಿಯ ಸಮಾಜ ಸೇವಕರ ಸಮಿತಿಯು ತನ್ನ 7ನೇ ವಾರ್ಷಿಕೋತ್ಸವದ ಅಂಗವಾಗಿ ಆಗಸ್ಟ್ 1 ರಂದು ನಗರದ ನರಸಿಂಹರಾಜ ಕಾಲೋನಿಯ 3 ನೇ ಮುಖ್ಯ ರಸ್ತೆಯಲ್ಲಿರುವ ಬಿ ಎಂ ಶ್ರೀ ಕಲಾಭವನದಲ್ಲಿ ಸಂಜೆ 5 ಗಂಟೆಗೆ 'ಸಮಾಜ ಸೇವಕರ ದಿನಾಚರಣೆ'ಯನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ವಿಮರ್ಶಕ ಡಾ ಜಿ ಎಸ್ ಸಿದ್ಧಲಿಂಗಯ್ಯ ವಹಿಸುವರು. ಉಡುಪಿ ಜಿಲ್ಲೆಯ ಕಿಸಾನ್ ಸಭಾದ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಭಾಗವಹಿಸಲಿದ್ದಾರೆ. ಮಂಜುನಾಥ ಅವರಿಂದ ಕಳರಿ ಪಯಟ್ಟು ಭಾರತೀಯ ಕಲಾ ಪ್ರದರ್ಶನ ಹಾಗೂ ಯಶವಂತ ಹಳಬಂಡಿ ಅವರಿಂದ ಜನಪದ ಗೀತೆಗಳ ಗಾಯನ ನಡೆಯಲಿವೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications