ತಿರುಪತಿ ಮಾದರಿ ಚಾಮುಂಡಿ ಬೆಟ್ಟ ಅಭಿವೃದ್ಧಿ

ಶುಕ್ರವಾರ ರಾತ್ರಿ ನಗರಕ್ಕೆ ಆಗಮಿಸಿ ವಾಸ್ತವ್ಯ ಹೂಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮೊದಲ ಶ್ರಾವಣ ಶುಕ್ರವಾರ ದಿನವಾದ ಇಂದು ಚಾಮುಂಡಿ ಬೆಟ್ಟಕ್ಕೆ ತೆರಳಿ ಅಧಿದೇವತೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಸಾವಿರಾರು ವರ್ಷಗಳ ಇತಿಹಾಸ ಇರುವ ಚಾಮುಂಡಿ ಬೆಟ್ಟದ ಅಭಿವೃದ್ಧಿಗೆ ಸರಕಾರ ಬದವಾಗಿದೆ. ಬೆಟ್ಟಕ್ಕೆ ಇರುವ ಮೆಟ್ಟಿಲುಗಳ ಅಭಿವೃದ್ಧಿಯ ಜೊತೆಗೆ ತಿರುಪತಿ ಬೆಟ್ಟದ ಮಾದರಿಯಲ್ಲಿ ಚಾಮುಂಡಿ ಬೆಟ್ಟವನ್ನೂ ಅಭಿವೃದ್ಧಿ ಪಡಿಸುವ ಚಿಂತನೆ ಇದೆ ಎಂದರು.
ಚಾಮುಂಡಿ ಬೆಟ್ಟದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮೈದುಂಬಿದ ಕೃಷ್ಣರಾಜ ಸಾಗರಕ್ಕೆ ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟದ ಸಹೋದ್ಯೋಗಿಗಳು ಬಾಗಿನ ಸಮರ್ಪಿಸಿದರು. ಸಾಂಪ್ರಾದಾಯಿಕ ಹೋಮ, ಹವನದಲ್ಲಿ ಭಾಗವಹಿಸಿದರು. ಬಳಿಕ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿದರು.
ಕೆಆರ್ ಎಸ್ ಸಮೀಪವೇ ಇರುವ ತಮ್ಮ ಹುಟ್ಟೂರು ಬೂಕನಕೆರೆಯಿಂದ ಅಣೆಕಟ್ಟು, ಬೃಂದಾವನ ನೋಡಲು ಅಪ್ಪ, ಅಣ್ಣ, ಅಮ್ಮನ ಜಗೆ ಕೈಹಿಡಿದು ಬರುತ್ತಿದ್ದೆ ಎನ್ನುವುದನ್ನು ನೆನೆದರು. ಈಗ ನಾಡಿನ ಜನತೆ ಪರವಾಗಿ ಬಾಗಿನ ಅರ್ಪಿಸುವ ಸುಯೋಗ ದೊರೆತಿರುವುದು ತಮ್ಮ ಸೌಭಾಗ್ಯ ಎಂದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications