ಕೃಷಿಸಚಿವರಿಗೆ ವಿಮೆ ಪರಿಹಾರ ಚೆಕ್ ಹಸ್ತಾಂತರ

2008ರ ಸಾಲಿನಲ್ಲಿ ಬೆಳೆ ನಷ್ಟ ಅನುಭವಿಸಿದ 3.15 ಲಕ್ಷ ರೈತರಿಗೆ 141.46 ಕೋಟಿ ರೂ ಗಳ ಪರಿಹಾರ ನೀಡಲಾಗುತ್ತದೆ. ಈ ಹಂಗಾಮಿನಲ್ಲಿ 10.56 ಲಕ್ಷ ರೈತರು ರೂ. 39.27 ಕೋಟಿ ವಿಮಾ ಕಂತನ್ನು ಪಾವತಿಸಿದ್ದರು.
ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯನ್ನು ರಾಜ್ಯದಲ್ಲಿ 2007ರ ಮುಂಗಾರು ಹಂಗಾಮಿನಿಂದ ಪ್ರಾಯೋಗಿಕವಾಗಿ ಅನುಷ್ಠಾನ ಗೊಳಿಸಲಾಗುತ್ತಿದೆ. ಈ ಯೋಜನೆಯಡಿ 2007-08ರಿಂದ 2008ರ ಮುಂಗಾರು ಹಂಗಾಮಿನ ವರೆಗೆ 0.69 ಲಕ್ಷ ರೈತರು ರೂ. 2.32 ಕೋಟಿಗಳನ್ನು ವಿಮಾ ಕಂತಾಗಿ ಪಾವತಿಸಿದ್ದು, ಇವರಲ್ಲಿ ಅರ್ಹ 0.55ಲಕ್ಷ ರೈತರಿಗೆ ರೂ.8 ಕೋಟಿ ಬೆಳೆ ವಿಮಾ ನಷ್ಟ ಪರಿಹಾರ ವಿತರಿಸಲಾಗಿದೆ ಎಂದು ಸಚಿವರು ಈ ಸಂದರ್ಭದಲ್ಲಿ ತಿಳಿಸಿದರು.
ಈ ಯೋಜನೆಯನ್ನು ಅನುಷ್ಠಾನಗೊಳಿಸುವ ಪೂರ್ವದಲ್ಲಿ ರಾಜ್ಯದಲ್ಲಿ ವ್ಯಾಪಕ ಬೆಳೆ ವಿಮಾ ಯೋಜನೆಯ 1985-86 ರಿಂದ 1999-2000 ನೇ ಸಾಲಿನವರೆಗೆ ಚಾಲ್ತಿಯಲ್ಲಿದ್ದು. ನಂತರ ಮುಕ್ತಾಯಗೊಂಡಿರುತ್ತದೆ. ಈ ಯೋಜನೆಯಡಿ ಬೆಳೆ ಸಾಲ ಪಡೆಯುವ ರೈತರು ಮಾತ್ರ ಭಾಗವಹಿಸುತ್ತಿದ್ದರು. ಒಟ್ಟು 30.02 ಲಕ್ಷ ರೈತರು ರೂ 20.30 ಕೋಟಿಗಳನ್ನು ಈ ಯೋಜನೆಯಡಿ ವಿಮಾ ಕಂತಾಗಿ ಪಾವತಿಸಿ ಭಾಗವಹಿಸಿದ್ದು ಇವರಲ್ಲಿ ಅರ್ಹ 5.60 ಲಕ್ಷ ರೈತರಿಗೆ ರೂ 67.17 ಕೋಟಿಗಳ ಬೆಳೆ ವಿಮಾ ಬೆಳೆ ವಿಮಾ ನಷ್ಟ ಪರಿಹಾರ ವಿತರಿಸಲಾಗಿದೆ.
2000 ಮುಂಗಾರು ಹಂಗಾಮಿನಿಂದ ರಾಷ್ಟ್ರೀಯ ಕೃಷಿ ವಿಮಾ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, 2007-08ನೇ ಸಾಲಿನವರೆಗೆ 78.50 ಲಕ್ಷ ರೈತರು ರೂ 285.71 ಕೋಟಿಗಳನ್ನು ವಿಮಾ ಕಂತಾಗಿ ಪಾವತಿಸಿ ಭಾಗವಹಿಸಿದ್ದು ಇವರಲ್ಲಿ ಅರ್ಹ 31.83 ಲಕ್ಷ ರೈತರಿಗೆ ರೂ 1263.66 ಕೋಟಿಗಳ ಬೆಳೆ ವಿಮಾ ನಷ್ಟ ಪರಿಹಾರ ವಿತರಿಸಲಾಗಿದೆ.
ಈ ಸಮಾರಂಭದಲ್ಲಿ ಲೋಕೋಪಯೋಗಿ ಸಚಿವ ಸಿ.ಎಂ. ಉದಾಸಿ, ಕೃಷಿ ಇಲಾಖೆಯ ನಿರ್ದೇಶಕ ಡಾ ಎ. ರಾಜಣ್ಣ ಅವರು ಉಪಸ್ಥಿತರಿದ್ದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications