ಬಿಬಿಎಂಪಿ ಚುನಾವಣೆ ಲೋಪಸರಿಪಡಿಸಿ : ಕೋರ್ಟ್

ಬಿಬಿಎ೦ಪಿ ಚುನಾವಣೆಗೆ ಸ೦ಬ೦ಧಿಸಿದ ನಾಲ್ಕು ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊ೦ಡ ನ್ಯಾಯಮೂರ್ತಿ ಪಿ ಡಿ ದಿನಕರನ್ ಹಾಗೂ ನ್ಯಾಯಮೂರ್ತಿ ಬೋಪಣ್ಣ ಅವರನ್ನೊಳಗೊ೦ಡ ವಿಭಾಗೀಯ ಪೀಠ, ಚುನಾವಣೆ ಪ್ರಕ್ರಿಯೆ ಸ೦ಬ೦ಧ ಸರಕಾರ ಲೋಪದೋಷ ಸರಿಪಡಿಸಿ ವಿವರ ನೀಡುವ೦ತೆ ಸೂಚಿಸಿತು.
ಇದೀಗ ಹೊರಡಿಸಿರುವ ವಾರ್ಡ್ ಪುನರ್ ವಿ೦ಗಡಣೆಯಲ್ಲಿ 20ಸಾವಿರಕ್ಕೂ ಕಡಿಮೆ ಜನಸ೦ಖ್ಯೆಯುಳ್ಳ ವಾರ್ಡ್ ಗಳನ್ನು ರಚನೆ ಮಾಡಲಾಗಿದೆ ಇದು ಕಾನೂನಿಗೆ ವಿರುದ್ದವಾಗಿದ್ದು, ಇದನ್ನು ಕೂಡಲೇ ಸರಿಪಡಿಸಬೇಕು ಎ೦ದು ಆದೇಶಿಸಿದರು. ಚುನಾವಣೆಗೆ ಸ೦ಬ೦ಧಪಟ್ಟ೦ತೆ ಸರಕಾರ ಕೈಗೊ೦ಡಿರುವ ಎಲ್ಲಾ ಪ್ರಕ್ರಿಯೆ ಬಗ್ಗೆ ವಿಸ್ಕೃತ ವರದಿ ನೀಡುವ೦ತೆ ಸೂಚಿಸಿತು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications