ಕರಾವಳಿಯಲ್ಲಿ ತಗ್ಗಿದ ಮಳೆಯ ಅಬ್ಬರ
ಬೆಂಗಳೂರು, ಜು, 22 : ಕಳೆದ ವಾರದಿಂದ ಕರಾವಳಿ ಮತ್ತು ಮಲೆನಾಡು ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯ ಅಬ್ಬರ ಕೊಂಚ ಕಡಿಮೆ ಆಗಿರುವ ವರದಿಯಾಗಿದೆ. ಭಾಗಮಂಡಲ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ವರುಣ ಆರ್ಭಟ ಭಾರಿ ಪ್ರಮಾಣದಲ್ಲಿ ಕಡಿಮೆಯಾಗಿದೆ.
ಯಲ್ಲಾಪುರ-8, ಕೊಲ್ಲೂರು-7, ಕಾರ್ಕಳ, ಆಗುಂಬೆ-6, ಸಿದ್ದಾಪುರ, ಬನವಾಸಿ-5, ಮಣಿ, ಧರ್ಮಸ್ಥಳ ಸೋಮವಾರಪೇಟೆ-4, ಸಿದ್ದಾಪುರ, ಹಂಚದಕಟ್ಟೆ, ಶೃಂಗೇರಿ, ಕೊಟ್ಟಿಗೆಹಾರ-3, ಮೂಲ್ಕಿ, ಪಣಂಬೂರು, ಬಜ್ಪೆ, ಕೋಟಾ, ಗೇರುಸೊಪ್ಪ, ಹಳಿಯಾಳ, ಸಾಂಬ್ರಾ, ಭಟ್ಕಳ, ಅಳಂದ, ಸೇಡಂ, ಮಡಿಕೇರಿ, ಭಾಗಮಂಡಲ, ನಾಪೋಕ್ಲು, ಎನ್ ಆರ್ ಪುರ-2, ಕುಂದಾಪುರ, ಕಾರವಾರ, ಧಾರವಾಡ, ಹಾನಗಲ್, ಹಿರೇಕೆರೂರು, ಬೀದರ್, ಬಸವಕಲ್ಯಾಣ, ಬಾಳೆಹೊನ್ನೂರಿನಲ್ಲಿ 1 ಸೆಂ ಮೀ ಮಳೆಯಾಗಿದೆ.
ಶುಕ್ರವಾರ ಬೆಳಗಿನವರೆಗೂ ಅಲ್ಲಲ್ಲಿ ಮಳೆ ಬೀಳುವ ಸಾಧ್ಯತೆಯಿದ್ದು, ತಂಪಾದ ವಾತಾವರಣ ಇರಲಿದೆ. ಕರಾವಳಿ ಮತ್ತು ಘಾಟ್ ಪ್ರದೇಶದಲ್ಲಿ ಮುಂದಿನ 48 ಗಂಟೆಗಲಲ್ಲಿ ಭಾರಿ ಮಳೆ ಬೀಳುವ ಸಂಭವವಿದೆ. ಬೆಂಗಳೂರಿನಲ್ಲಿ ಮೂಡಕವಿದ ವಾತಾವರಣ ಇದ್ದು, ಸಾಧಾರಣ ಮಳೆ ಆಗುವ ಸಾಧ್ಯತೆ ಇದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications