ಪ್ರಕೃತಿ ವಿಕೋಪ : ತುರ್ತು ಪರಿಹಾರಕ್ಕೆ 5 ಕೋಟಿ ರು.

ರಾಜ್ಯದಲ್ಲಿ ಉಂಟಾಗಿರುವ ಪ್ರವಾಹ ಹಾನಿ ಕುರಿತಂತೆ ಶುಕ್ರವಾರ ವಿಧಾನ ಪರಿಷತ್ನಲ್ಲಿ ಕಂದಾಯ ಸಚಿವರ ಪರವಾಗಿ ಸ್ವಪ್ರೇರಣೆ ಹೇಳಿಕೆ ನೀಡಿದ ಅವರು ಹಾನಿಗೊಳಗಾದ ಉಳಿದ ಜಿಲ್ಲೆಗಳಿಗೂ ಅಗತ್ಯಕ್ಕೆ ಅನುಗುಣವಾಗಿ ರು.1 ಕೋಟಿಯಿಂದ ರೂ.2 ಕೋಟಿ ರು. ಅನುದಾನ ಬಿಡುಗಡೆ ಮಾಡಲು ಕ್ರಮಕೈಗೊಳ್ಳಲಾಗಿದೆ. ಅಲ್ಲದೆ, ಪ್ರಕೃತಿ ವಿಕೋಪದ ಹಾನಿಯ ತುರ್ತು ಪರಿಹಾರಕ್ಕಾಗಿ ಲಭ್ಯವಿರುವ ಹಣವನ್ನು ಬಳಸಿಕೊಳ್ಳಲು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.
ಹನ್ನೊಂದು ಜಿಲ್ಲೆಗಳಲ್ಲಿ ವಾಡಿಕೆಮಳೆಗಿಂತ ಆಗಿರುವ ಮಳೆ ಅಧಿಕವಾಗಿದೆ - ಉಡುಪಿ (ವಾಡಿಕೆ ಮಳೆ 652 ಮಿ.ಮೀ, ಆಗಿರುವ ಮಳೆ 1231 ಮಿ.ಮೀ), ದಕ್ಷಿಣ ಕನ್ನಡ(ವಾ. 622, ಆ.1022), ಉತ್ತರ ಕನ್ನಡ(ವಾ. 513, ಆ.925), ಕೊಡಗು(ವಾ. 392, ಆ.883), ಶಿವಮೊಗ್ಗ(ವಾ.359, ಆ.778), ಚಿಕ್ಕಮಗಳೂರು(ವಾ.333, ಆ.600), ಹಾಸನ(ವಾ.123, ಆ.242), ಬೆಳಗಾಂ(ವಾ.115, ಆ.212), ಹಾವೇರಿ(ವಾ.95, ಆ.190), ಧಾರವಾಡ(ವಾ.83, ಆ.145), ಚಿತ್ರದುರ್ಗ(ವಾ.49, ಆ.103).
ಜಿಲ್ಲೆಗಳಲ್ಲಿನ ಪ್ರವಾಹ ಪರಿಸ್ಥಿತಿ ಎದುರಿಸಲು ಎಲ್ಲಾ ಸಿದ್ಧತೆಗಳೊಂದಿಗೆ ಸನ್ನದ್ಧರಾಗಿರುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದ್ದು ಈಗಾಗಲೇ ನಿಯಂತ್ರಣ ಕೊಠಡಿಗಳನ್ನು ಪ್ರಾರಂಭಿಸಿ, ವೈಯರ್ಲೆಸ್ ಸಂಪರ್ಕ ಅಳವಡಿಸಿಕೊಂಡಿರುತ್ತಾರೆ. ಪ್ರವಾಹ ಪೀಡಿತರಿಗೆ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿ ಅಗತ್ಯ ಊಟ, ವಸತಿ ಮತ್ತು ಔಷಧೋಪಚಾರಗಳನ್ನು ಒದಗಿಸಲಾಗಿದೆ. ಕರಾವಳಿ ಜಿಲ್ಲೆಗಳಿಗೆ ಹೆಚ್ಚುವರಿಯಾಗಿ ರಕ್ಷಣಾ ಕೆಲಸಕ್ಕೆ ತಮಿಳುನಾಡಿನ ಅರಕೋಣಂನಿಂದ ನ್ಯಾಷನಲ್ ಡಿಸಾಸ್ಟರ್ ರೆಸ್ಪಾನ್ಸ್ ಫೋರ್ಸನ 89 ಅಧಿಕಾರಿ ಮತ್ತು ಸಿಬ್ಬಂದಿಯವರನ್ನು ಮತ್ತು 11 ಇನ್ಫ್ಲೇಟಬಲ್ ಬೋಟ್ಗಳನ್ನು ಸುರಕ್ಷಿತಾ ಕೆಲಸಗಳಿಗೆ ಬಳಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ಪ್ರವಾಹ ಮತ್ತು ನೈಸರ್ಗಿಕ ವಿಕೋಪಗಳ ಬಗ್ಗೆ ಸಾರ್ವಜನಿಕರಿಗೆ ಪೂರ್ಣ ರೀತಿಯ ಸುರಕ್ಷತೆ ಮತ್ತು ಪರಿಹಾರವನ್ನು ಒದಗಿಸಲು ಕರ್ನಾಟಕ ಸರ್ಕಾರವು ಬದ್ಧವಾಗಿದೆ ಎಂದು ಆಚಾರ್ಯ ತಿಳಿಸಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications