ಗೋರಕ್ಷಣೆಗೆ ನಾವು ಸಿದ್ಧ : ಮುಸ್ಲಿಂ ಸಂಘಟನೆ

Dangi Breed
ಬೆಂಗಳೂರು, ಜು. 15 : ಗೋಹತ್ಯೆ ಮಾಡುವವರು ಮುಸ್ಲಿಮರು. ಗೋವುಗಳನ್ನು ಕಸಾಯಿಖಾನೆಗೆ ತಳ್ಳಲು ಮುಸ್ಲಿಮರೆ ನೇತೃತ್ವ ವಹಿಸುತ್ತಾರೆ ಎಂಬ ಆರೋಪಕ್ಕೆ ಪುಲ್ ಸ್ಟಾಪ್ ಬಿದ್ದಿದೆ. ರಾಜ್ಯ ಸರಕಾರ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರುವ ಚಿಂತನೆಯಲ್ಲಿರುವ ಬೆನ್ನಲ್ಲೇ ಪ್ರಸಕ್ತ ಮಳೆಗಾಲದ ಅಧಿವೇಶನದಲ್ಲಿಯೇ ರಾಜ್ಯ ಸರಕಾರ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತರಬೇಕೆ೦ದು ಮುಸ್ಲಿ೦ ರಾಷ್ಟ್ರೀಯ ಮ೦ಚ್ ಮತ್ತು ಕರ್ನಾಟಕ ಮುಸ್ಲಿ೦ ಸ೦ಘಟನೆ ರಾಜ್ಯ ಸರಕಾರವನ್ನು ಒತ್ತಾಯಿಸಿದೆ.

ಗೋಹತ್ಯೆ ಕಾಯ್ದೆ ಜತೆಗೆ ಗೋಸಂರಕ್ಷಣೆ ಆಯೋಗವನ್ನು ಜಾರಿಗೆ ತ೦ದು ಗೋಹತ್ಯೆ ಮಾಡಿದವರಿಗೆ ಶಿಕ್ಷೆಯ ಪ್ರಮಾಣದ ಸ್ವರೂಪ ಬದಲಿಸಿ ಕಠಿಣ ಶಿಕ್ಷೆ ವಿಧಿಸಬೇಕೆ೦ದು ಕರ್ನಾಟಕ ಮುಸ್ಲಿ೦ ಸಂಘಟನೆಗಳ ಒಕ್ಕೂಟದ ಮುಖ೦ಡ ಮಹಮ್ಮದ್ ಉಸ್ಮಾನ್ ಆಲಿ ಇಲಿಯಾಜ್ ಪತ್ರಿಕಾಗೋಷ್ಟಿಯಲ್ಲಿ ಒತ್ತಾಯಿಸಿದ್ದಾರೆ.

ಈಗಾಗಲೇ ಗುಜರಾತ್ ಸರಕಾರ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತ೦ದಿರುವುದನ್ನು ಸುಪ್ರೀ೦ಕೋರ್ಟ್ ಎತ್ತಿ ಹಿಡಿದಿದೆ. ಇದೇ ರೀತಿ ರಾಜ್ಯ ಸರಕಾರ ಸಹ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಬೇಕೆ೦ದು ಆಗ್ರಹಿಸಿದ್ದಾರೆ. ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರುವುದಕ್ಕೆ ಮುಸ್ಲಿ೦ರ ವಿರೋಧವಿಲ್ಲ. ಕೆಲ ರಾಜಕೀಯ ಪಕ್ಷಗಳು ಮತ ಬ್ಯಾ೦ಕಿಗಾಗಿ ಮುಸ್ಲಿ೦ರು ಇದನ್ನು ವಿರೋಧಿಸುತ್ತಿದ್ದಾರೆ ಎ೦ಬುವುದು ಸರಿಯಲ್ಲ ಎ೦ದು ರಾಜಕಾರಣಿಗಳ ವಿರುದ್ದ ಕಿಡಿಕಾರಿದರು. ಇತ್ತೀಚೆಗೆ ಗೃಹ ಸಚಿವ ವಿ ಎಸ್ ಆಚಾರ್ಯ ರಾಜ್ಯದಲ್ಲಿರುವ ಕಸಾಯಿಖಾನೆ ನಿಷೇಧಿಸಿ ಆದೇಶ ಹೊರಡಿಸಿದ್ದರು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+