ಗೋರಕ್ಷಣೆಗೆ ನಾವು ಸಿದ್ಧ : ಮುಸ್ಲಿಂ ಸಂಘಟನೆ

ಗೋಹತ್ಯೆ ಕಾಯ್ದೆ ಜತೆಗೆ ಗೋಸಂರಕ್ಷಣೆ ಆಯೋಗವನ್ನು ಜಾರಿಗೆ ತ೦ದು ಗೋಹತ್ಯೆ ಮಾಡಿದವರಿಗೆ ಶಿಕ್ಷೆಯ ಪ್ರಮಾಣದ ಸ್ವರೂಪ ಬದಲಿಸಿ ಕಠಿಣ ಶಿಕ್ಷೆ ವಿಧಿಸಬೇಕೆ೦ದು ಕರ್ನಾಟಕ ಮುಸ್ಲಿ೦ ಸಂಘಟನೆಗಳ ಒಕ್ಕೂಟದ ಮುಖ೦ಡ ಮಹಮ್ಮದ್ ಉಸ್ಮಾನ್ ಆಲಿ ಇಲಿಯಾಜ್ ಪತ್ರಿಕಾಗೋಷ್ಟಿಯಲ್ಲಿ ಒತ್ತಾಯಿಸಿದ್ದಾರೆ.
ಈಗಾಗಲೇ ಗುಜರಾತ್ ಸರಕಾರ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತ೦ದಿರುವುದನ್ನು ಸುಪ್ರೀ೦ಕೋರ್ಟ್ ಎತ್ತಿ ಹಿಡಿದಿದೆ. ಇದೇ ರೀತಿ ರಾಜ್ಯ ಸರಕಾರ ಸಹ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಬೇಕೆ೦ದು ಆಗ್ರಹಿಸಿದ್ದಾರೆ. ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರುವುದಕ್ಕೆ ಮುಸ್ಲಿ೦ರ ವಿರೋಧವಿಲ್ಲ. ಕೆಲ ರಾಜಕೀಯ ಪಕ್ಷಗಳು ಮತ ಬ್ಯಾ೦ಕಿಗಾಗಿ ಮುಸ್ಲಿ೦ರು ಇದನ್ನು ವಿರೋಧಿಸುತ್ತಿದ್ದಾರೆ ಎ೦ಬುವುದು ಸರಿಯಲ್ಲ ಎ೦ದು ರಾಜಕಾರಣಿಗಳ ವಿರುದ್ದ ಕಿಡಿಕಾರಿದರು. ಇತ್ತೀಚೆಗೆ ಗೃಹ ಸಚಿವ ವಿ ಎಸ್ ಆಚಾರ್ಯ ರಾಜ್ಯದಲ್ಲಿರುವ ಕಸಾಯಿಖಾನೆ ನಿಷೇಧಿಸಿ ಆದೇಶ ಹೊರಡಿಸಿದ್ದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications