ಭಾಷಾ ಮಾಧ್ಯಮ : ಸುಪ್ರಿಂಕೋರ್ಟ್ ನಿಂದ ತಡೆಯಾಜ್ಞೆ
ನವದೆಹಲಿ, ಜು. 14 : ಭಾಷಾ ಮಾಧ್ಯಮ ನೀತಿ ವಿವಾದದಲ್ಲಿ ಹೈಕೋರ್ಟ್ ನಿಂದ ಮುಖಭಂಗ ಅನುಭವಿಸಿದ್ದ ರಾಜ್ಯ ಸರಕಾರ ತಾತ್ಕಾಲಿಕವಾಗಿ ನಿಟ್ಟುಸಿರು ಬಿಡುವಂತಾಗಿದೆ. ಈ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ವಿಚಾರಣೆಗೆ ಸುಪ್ರಿಂಕೋರ್ಟ್ ಮಂಗಳವಾರ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ.
ಭಾಷಾ ಮಾಧ್ಯಮ ವಿವಾದ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆಯ ಹಂತದಲ್ಲಿ ಇರುವುದರಿಂದ ಜುಲೈ 21 ರವರೆಗೆ ಕಾಲಾವಕಾಶ ನೀಡುವಂತೆ ಸರಕಾರ ಕೋರಿತ್ತು, ಆದರೆ, ಹೈಕೋರ್ಟ್ ಅನುಮತಿ ನಿರಾಕರಿಸಿ ಜುಲೈ 16ರ ಒಳಗೆ ನಿಲುವು ಸ್ಪಷ್ಟಪಡಿಸಬೇಕೆಂದು ನಿನ್ನೆಯಷ್ಟೇ ಗಡುವು ನೀಡಿತ್ತು. ಈಗ ಹೈಕೋರ್ಟ್ ವಿಚಾರಣೆಗೆ ಸುಪ್ರಿಂಕೋರ್ಟ್ ಜು.24ರವರೆಗೆ ಮುಂದೂಡಿ ತಡೆಯಾಜ್ಞೆ ನೀಡಿದೆ.
(ಏಜನ್ಸೀಸ್)












Click it and Unblock the Notifications