ಬಿಜೆಪಿ ಕೈಗೆ ಕೆಎಂಎಫ್ ಅಧಿಕಾರ

ಜುಲೈ 9, 10, 11 ರಂದು ನಡೆದ 13 ಜಿಲ್ಲಾ ಹಾಲು ಒಕ್ಕೂಟಗಳ ಪೈಕಿ ಬಿಜೆಪಿ ನಿರ್ದೇಶಕರೇ ಆಯ್ಕೆಯಾಗಿದ್ದಾರೆ. ಅಲ್ಲದೇ ಸರಕಾರದಿಂದ ನಾಮಕರಣಗೊಂಡಿರುವ 3 ಸದಸ್ಯರು ಮತ್ತು 3 ಅಧಿಕಾರಿಗಳು ಬಿಜೆಪಿ ಅಭ್ಯರ್ಥಿ ಪರ ನಿಲ್ಲಲಿದ್ದಾರೆ. ಅಂದರೆ, ಬಿಜೆಪಿ ಅಭ್ಯರ್ಥಿ ಪರ ಮತ ಚಲಾಯಿಸಲಿರುವ ನಿರ್ದೇಶಕ ಸಂಖ್ಯೆ 16 ಆದರೆ, ರೇವಣ್ಣ ಪರ ಕೇವಲ ಇಬ್ಬರು ನಿರ್ದೇಶಕರಿದ್ದಾರೆ.
ತಮಗೆ ಅಧಿಕಾರ ನೀಡಲಿಲ್ಲ ಎಂಬ ಕಾರಣಕ್ಕೆ ಜೆಡಿಎಸ್ ಮೇಲೆ ಕತ್ತಿ ಮಸೆಯುತ್ತಲೇ ಚುನಾವಣೆಯಲ್ಲಿ ಬಹುಮತ ಪಡೆದು ಅಧಿಕಾರಕ್ಕೆ ಬಂದ ಬಿಜೆಪಿ ಮೊದಲು ಕೆಂಗಣ್ಣು ಬೀರಿದ್ದು ಕೆಎಂಎಫ್ ಮೇಲೆ. ಕೆಎಂಎಫ್ ಆಡಳಿತ ಮಂಡಳಿ ಹಾಲಿನ ದರ ಹೆಚ್ಚಳ ಮಾಡುವ ನಿರ್ಧಾರ ಕೈಗೊಂಡಿದ್ದು ಇದಕ್ಕೆ ಪುಷ್ಟಿ ನೀಡಿತು. ಹಾಲಿನ ದರ ಹೆಚ್ಚಳಕ್ಕೆ ಸರಕಾರ ಅವಕಾಶ ನೀಡಿರಲಿಲ್ಲ.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications