ನ್ಯಾ.ಸೋಮಶೇಖರ್ ಆಯೋಗದಿಂದ ವಿಚಾರಣೆ
ಬೆಂಗಳೂರು, ಜು. 2 : ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಮತ್ತು ಇತರ ಜಿಲ್ಲೆಗಳಲ್ಲಿ ಚರ್ಚೆ ಮೇಲೆ ನಡೆದ ಹಲ್ಲೆಗಳ ಕುರಿತು ವಿಚಾರಣೆ ನಡೆಸಲು ಸರ್ಕಾರ ನೇಮಿಸಿರುವ ನ್ಯಾಯಮೂರ್ತಿ ಸೋಮಶೇಖರ್ ಆಯೋಗವು ವಿವಿಧ ಜಿಲ್ಲೆಗಳಿಗೆ ಸಂಬಂಧಿಸಿದಂತೆ ವಿಚಾರಣೆಯನ್ನು ನಡೆಸಲಿದೆ. ವಿಚಾರಣೆಗಳ ದಿನಾಂಕ ಮತ್ತು ವಿವರಗಳು ಈ ಕೆಳಕಂಡಂತಿವೆ
ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿದಂತೆ ಮಂಗಳೂರಿನ ಪ್ರವಾಸಿ ಮಂದಿರದಲ್ಲಿ ಜುಲೈ 6 ರಿಂದ 9 ರವರೆಗೆ ವಿಚಾರಣೆಯನ್ನು ನಡೆಸಲಿದೆ. ಜುಲೈ 6 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5.30 ಗಂಟೆಯವರೆಗೆ ಹಾಗೂ ಜುಲೈ 7 ರಿಂದ 9 ರವರೆಗೆ ಬೆಳಿಗ್ಗೆ 10 ಗಂಟೆಯಿಂದ 5.30 ಗಂಟೆಯವರೆಗೆ ನಡೆಸಲಿದೆ.
ದಾವಣಗೆರೆ ಜಿಲ್ಲೆಗೆ ಸಂಬಂಧಿಸಿದಂತೆ ಆಯೋಗವು ಜುಲೈ 13 ರಿಂದ 17 ರವರೆಗೆ ನಗರದ ಬಾಲಬ್ರೂಯಿಯಲ್ಲಿರುವ ವಿಚಾರಣಾ ಸಭಾಂಗಣದಲ್ಲಿ ವಿಚಾರಣೆಯನ್ನು ನಡೆಸಲಿದೆ. ವಿಚಾರಣೆಯು ಆಯಾ ದಿನದಂದು ಮಧ್ಯಾಹ್ನ 2.30 ಗಂಟೆಯಿಂದ ಸಂಜೆ 5.30 ಗಂಟೆಯವರೆಗೆ ನಡೆಯಲಿದೆ.
ಚಿಕ್ಕಮಗಳೂರು ಜಿಲ್ಲೆ ಸಂಬಂಧಿಸಿದಂತೆ ಆಯೋಗವು ಜುಲೈ 20 ರಂದು ಬೆಳಿಗ್ಗೆ 10 ರಿಂದ ಸಂಜೆ 5.30 ಗಂಟೆಯವರೆಗೆ ಚಿಕ್ಕಮಗಳೂರಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿಚಾರಣೆಯನ್ನು ನಡೆಸಲಿದೆ.
ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿದಂತೆ ಆಯೋಗವು ಜುಲೈ 22 ರಿಂದ 24 ರವರೆಗೆ ಮಂಗಳೂರಿನ ಪ್ರವಾಸಿ ಮಂದಿರದಲ್ಲಿ ವಿಚಾರಣೆಯನ್ನು ನಡೆಸಲಿದೆ. ಜುಲೈ 22 ರಂದು ಬೆಳಿಗ್ಗೆ 10 ಗಂಟೆಯಿಂದ 5.30೦ ಗಂಟೆಯವರೆಗೆ ಹಾಗೂ ಜುಲೈ 23 ಹಾಗೂ 24 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5.30 ಗಂಟೆಯವರೆಗೆ ವಿಚಾರಣೆ ನಡೆಸಲಿದೆ.
(ದಟ್ಸ್ ಕನ್ನಡ ವಾರ್ತೆ)