ಮುಂಬೈನಲ್ಲಿ ಎನ್ಎಸ್ ಜಿ ಘಟಕಕ್ಕೆ ಚಾಲನೆ

ಮುಂಬೈ, ಜೂ. 30 : ಮುಂಬೈ ಭಯೋತ್ಪಾದನೆ ನಂತರ ರಾಷ್ಟ್ರೀಯ ಭದ್ರತಾ ಪಡೆ (ಎನ್ಎಸ್ ಜಿ) ದೇಶದ ನಾಲ್ಕು ನಗರಗಳಲ್ಲಿ ಸ್ಥಾಪಿಸಲು ಕೇಂದ್ರದ ಸರಕಾರ ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ ಇಂದು ನವದೆಹಲಿಯ ನಂತರ ಮುಂಬೈನಲ್ಲಿ ಎನ್ ಎಸ್ ಜಿ ಘಟಕಕ್ಕೆ ಗೃಹ ಸಚಿವ ಪಿ ಚಿದಂಬರಂ ಚಾಲನೆ ನೀಡಿದರು. ಇಳಿದ ಮೂರು ಎನ್ ಎಸ್ ಜಿ ಘಟಕಗಳನ್ನು ಚೆನ್ನೈ, ಕೊಲ್ಕತ್ತಾ ಮತ್ತು ಹೈದರಾಬಾದ್ ಗಳಲ್ಲಿ ಸ್ಥಾಪಿಸಲು ಕೇಂದ್ರ ಸರಕಾರ ಮುಂದಾಗಿದೆ.


ಮುಂಬೈ ವಿಮಾನ ನಿಲ್ದಾಣದ ಸಮೀಪಿವಿರುವ ಅಂಧೇರಿಯ ಮರೂಲ್ ಪ್ರದೇಶದ 22 ಎಕರೆ ಪ್ರದೇಶದಲ್ಲಿ ಎನ್ ಎಸ್ ಜಿ ಘಟಕವನ್ನು ಸ್ಫಾಪಿಸಲಾಗಿದೆ. ಎನ್ ಎಸ್ ಜಿ ಕಮಾಂಡೋಗಳಿಗೆ ತರಬೇತಿ ನೀಡಲು ಸುಸಜ್ಜಿತವಾಗಿ ಘಚಕವನ್ನು ತಯಾರಿಸಲಾಗಿದೆ. ಪಶ್ಚಿಮ ಭಾಗದಲ್ಲಿ ನಡೆಯುವ ಭಯೋತ್ಪಾದನೆ ಕೃತ್ಯ ತಡೆಯಲು ಸರಕಾರ ಘಟಕವನ್ನು ಸ್ಥಾಪಿಸಿದೆ.

ಕಳೆದ ವರ್ಷ ನವೆಂಬರ್ 26 ರಂದು ಲಷ್ಕರ್ ಇ ತೊಯ್ಬಾ ಸಂಘಟನೆಗಳು ಮುಂಬೈ ಮೇಲೆ ನಡೆಸಿದ ವಿಧ್ವಂಸಕ ಕೃತ್ಯ ನಡೆದಾಗ ಎನ್ ಎಸ್ ಜಿ ಘಟನೆ ಮುಂಬೈ ತಲುಪಲು ಸಮಯ ತೆಗೆದುಕೊಂಡಿತ್ತು. ಅಷ್ಟೊತ್ತಿಗಾಗಲೇ ಜೀವಹಾನಿ, ಆಸ್ತಿ ಹಾನಿ ನಡೆದು ಹೋಗಿತ್ತು. ಸರಕಾರದ ಈ ಕ್ರಮದಿಂದ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಇದರಿಂದ ಎಚ್ಚತ್ತುಕೊಂಡ ಸರಕಾರ ದೇಶದ ಇತರೆ ಪ್ರದೇಶಗಳಲ್ಲಿ ಕೂಡಾ ಎನ್ ಎಸ್ ಜಿ ಘಟಕ ಸ್ಥಾಪಿಸಲು ನಿರ್ಧರಿಸಿದೆ.

ಚನ್ನೈನ ವಂದಾಲೂರು, ಕೊಲ್ಕತ್ತಾದ ಬಾದು ಮತ್ತು ಹೈದರಾಬಾದ್ ನ ತ್ರಿಮುಲ್ ಗೇರಿ ಎಂಬ ಸ್ಥಳದಲ್ಲಿ ಎನ್ ಎಸ್ ಜಿ ಘಟಕ ಸ್ಥಾಪಿಸಲು ಭೂಮಿಯಲ್ಲಿ ವಶಪಡಿಸಿಕೊಳ್ಳಲಾಗಿದ್ದು, ಶೀಘ್ರದಲ್ಲೇ ಆ ಘಟಕಗಳನ್ನು ಸೇವೆ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ.

(ಏಜನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+