ಕಲ್ಬುರ್ಗಿಯಲ್ಲಿ ಯುರೇನಿಯಂ ನಿಕ್ಷೇಪ ಪತ್ತೆ

ಕೆಲ ವರ್ಷಗಳ ಹಿಂದೆ ಗೋಗಿ ಗ್ರಾಮದಲ್ಲಿ ಎಂಟು ಎಕರೆ ಭೂ ಪ್ರದೇಶವನ್ನು ಪಡೆದು, ಸಮೀಕ್ಷೆ ನಡೆಸಿದ್ದ ಅಣು ಸಂಶೋಧಕರು , ಯುರೇನಿಯಂ ಅದಿರಿನ ನಿಕ್ಷೇಪ ಇರುವುದನ್ನು ಖಚಿತಪಡಿಸಿದ್ದಾರೆ.ಗೋಗಿ ಗ್ರಾಮದ ಲ್ಲಿ ಅದಿರು ಪತ್ತೆಗೆ ಗಣಿಗಾರಿಕೆ ನಡೆಸಲು ಬೇಕಿರುವ ನೂರು ಎಕರೆ ಪ್ರದೇಶವನ್ನು ಗ್ರಾಮಸ್ಥರಿಂದ ಸ್ವಾದೀನ ಮಾಡಿಕೊಳ್ಳುವಂತೆ ಕಂದಾಯ ಇಲಾಖೆಗೆ ಅಣು ಸಂಶೋಧನಾ ಕೇಂದ್ರಸೂಚನೆ ನೀಡಿದೆ.
ಗೋಗಿ ಗ್ರಾಮಸ್ಥರ ವಿರೋಧ:
ಕೇಂದ್ರ ಸರ್ಕಾರಕ್ಕೆ ಭೂಮಿ ಬೇಕಿರುವುದರಿಂದ ಭೂ ಸ್ವಾದೀನ ಕಾಯ್ದೆಯ ತುರ್ತು ವಿಧಿ ಅನ್ವಯ ಭೂ ಪ್ರದೇಶವನ್ನು ಪಡೆಯಲಾಗುವುದು. ಕಂದಾಯ ಇಲಾಖೆ ಕರ್ನಾಟಕ ಸರ್ಕಾರಕ್ಕೆ ಮನವಿ ಸಲ್ಲಿಸಲಿದೆ.ಜುಲೈ 9 ರಂದು ಅಂತಿಮ ಹಂತದ ಸಮೀಕ್ಷೆಗೆ ಸಂಶೋಧಕರ ತಂಡ ಮತ್ತೆ ಭೇಟಿ ಕೊಡುವ ಸಾಧ್ಯತೆಯಿದೆ ಎಂದು ತಹಸೀಲ್ದಾರ್ ಜನಾರ್ಧನ ಉಪಾಧ್ಯಾಯ ಹೇಳಿದರು.
ಸ್ಥಳೀಯ ಗ್ರಾಮ ಪಂಚಾಯತಿ ಮುಖಂಡರು ಊರಿನಲ್ಲಿ ಗಣಿಗಾರಿಕೆಗೆ ಅವಕಾಶ ನೀಡಬಾರದು, ಈಗಾಗಲೇ ಸಮೀಕ್ಷೆ ಹೆಸರಿನಲ್ಲಿ ನಡೆದ ನೆಲ ಅಗೆತದಿಂದ ಹಲವು ಜನರಿಗೆ ಚರ್ಮರೋಗಗಳು ಕಾಣಿಸಿವೆ. ಕುಡಿಯುವ ನೀರು, ಗಾಳಿ ಕಲುಷಿತಗೊಂಡಿದೆ. ಗಣಿಗಾರಿಕೆಗೆ ಅನುಮತಿ ಸಿಕ್ಕರೆ ಜನವಸತಿ ನಿರ್ನಾಮವಾದಂತೆಯೇ ಸರಿ . ಅಣು ಸಂಶೋಧಕರಿಗೆ ಅನುಮತಿ ನೀಡದಂತೆ ಸರ್ಕಾರಕ್ಕೆ ಮನವಿ ಮಾಡುವುದಾಗಿ ಗ್ರಾಮಸ್ಥರು ಹೇಳಿದರು. ಆದರೆ , ಮಹತ್ವದ ಯೋಜನೆಗೆ ಭೂ ಸ್ವಾದೀನ ಮಾಡಬೇಕಾದರೆ, ಸರ್ಕಾರ ಮೀನಾ ಮೇಷ ಎಣಿಸದು. ಗ್ರಾಮಸ್ಥರು ಜಾಗ ಖಾಲಿ ಮಾಡಲೇಬೇಕು ಎಂದು ಮೂಲಗಳಿಂದ ತಿಳಿದುಬಂದಿದೆ.
(ಏಜೆನ್ಸೀಸ್)












Click it and Unblock the Notifications