ಮತಾಂತರ ನಿಷೇಧ ಕಾಯ್ದೆ ರದ್ದಾಗಲಿದೆ: ಮಿಷನರಿ

ಅಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಮತಾಂತರ ನಿಷೇಧ ಕಾಯ್ದೆಯನ್ನು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಸದ್ಯದಲ್ಲೇ ಹಿಂದಕ್ಕೆ ಪಡೆಯಲಿದೆ. ಇದರಿಂದ ಕ್ರಿಶ್ಚಿಯನ್ನರಿಗೆ ಹಾಗೂ ಅಲ್ಪಸಂಖ್ಯಾತರಿಗೆ ಹೆಚ್ಚಿನ ಶಕ್ತಿ ದೊರೆತಂತೆ. ಕಾಂಗ್ರೆಸ್ ಸರ್ಕಾರ ಜ್ಯಾತ್ಯಾತೀತ ಸರ್ಕಾರವಾಗಿದ್ದು ಎಂದೂ ಅಲ್ಪಸಂಖ್ಯಾತರಿಗೆ ನೋವುಂಟು ಮಾಡಿಲ್ಲ. ಜನರ ಸ್ವಾತಂತ್ರ್ಯ ಹರಣ ಮಾಡಿಲ್ಲ. ಅಲ್ಪ ಸಂಖ್ಯಾತರ ಹಕ್ಕುಗಳಿಗೆ ಮಾನ್ಯತೆ ಸಿಕ್ಕಂತೆ ಆಗುತ್ತದೆ ಎಂದು ಯೋಹಾನನ್ ಹೇಳಿದ್ದಾರೆ.
ಸದರಿ ಕಾಯ್ದೆ ಹಿಂಪಡೆಯುವುದರಿಂದ ಪ್ರತಿ ನಾಗರೀಕರಿಗೂ ಸಮಾನ ಹಕ್ಕು, ಸ್ವಾತಂತ್ರ್ಯ ನೀಡಿದಂತಾಗುತ್ತದೆ. ಬಿಜೆಪಿ ಸರ್ಕಾರದ ಕ್ರಮ ಏಕಪಕ್ಷೀಯವಾಗಿತ್ತು ಎಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. ರಾಜಸ್ತಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಇದಕ್ಕೆ ಸಹಮತ ವ್ಯಕ್ತಪಡಿಸುತ್ತಾ, ಈ ಬಗ್ಗೆ ಕೇಂದ್ರ ಸರ್ಕಾರ ಮನವಿ ಸಲ್ಲಿಸಿರುವುದಾಗಿ ಹೇಳಿದರು.
ಮಧ್ಯ ಪ್ರದೇಶ, ಒರಿಸ್ಸಾ, ಛತ್ತೀಸ್ ಗಢ, ಹಿಮಾಚಲ ಪ್ರದೇಶ ಹಾಗೂ ಗುಜರಾತ್ ನಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಯಲ್ಲಿದೆ. ಅರುಣಾಚಲ ಪ್ರದೇಶ ಮತ್ತು ರಾಜಸ್ತಾನ ಮತಾಂತರ ಕಾನೂನಿಗೆ ಓಕೆ ಅಂದಿದ್ದರೂ ಇನ್ನೂ ಸಮರ್ಪಕವಾಗಿ ಅಳವಡಿಸಿಲ್ಲ. ಕರ್ನಾಟಕದಲ್ಲಿ ಕಾಯ್ದೆ ಶಕ್ತಿಯುತವಾಗಿ ಬಳಕೆ ಆಗುತ್ತಿಲ್ಲ. ಚರ್ಚ್ ದಾಳಿ ಪ್ರಕರಣಕ್ಕೆ ಮತಾಂತರ ಮೂಲ ಕಾರಣ ಎಂಬುದನ್ನು ರಾಜಕೀಯ ನಾಯಕರು ಮುಚ್ಚಿ ಹಾಕಿದರು ಎಂದು ಬಿಜೆಪಿ ಕಾರ್ಯಕರ್ತರ ಹೇಳಿಕೆ. ಒಟ್ಟಿನಲ್ಲಿ ಕ್ರಿಶ್ಚಿಯನ್ ಮಿಷನರಿಗಳಿಗೆ ಮತಾಂತರ ಮಾಡಲು ಸತ್ವಯುತವಾದ ಅಧಿಕಾರ ನೀಡುವತ್ತ ಯುಪಿಎ ಸರ್ಕಾರ ಮುಂದಾಗಿದೆ ಎಂಬುದಂತೂ ಸುಳ್ಳಲ್ಲ.
(ಏಜೆನ್ಸೀಸ್)












Click it and Unblock the Notifications