ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನರಸಿಂಹ ರಾವ್ ಗೆ ಭಾರತ ರತ್ನ ನೀಡಿ: ಚಿರಂಜೀವಿ
ನರಸಿಂಹರಾವ್ ಅವರ ಆರ್ಥಿಕ ಸುಧಾರಣೆಗಳು ದೇಶದ ಪ್ರಗತಿಗೆ ಸಹಕರಿಸಿದ್ದವು. ಅವರ ಆರ್ಥಿಕ ಸುಧಾರಣೆಗಳಿಂದಲೇ ನಮ್ಮ ದೇಶ ಇಂದೂ ಸಹ ಬೃಹತ್ ದೇಶಗಳೊಂದಿಗೆ ಸ್ಪರ್ಧಿಸುತ್ತಿದೆ ಎಂದು ಪ್ರಜಾರಾಜ್ಯಂ ಪಕ್ಷದ (ಪಿಆರ್ ಪಿ) ಮುಖ್ಯಸ್ಥ ಚಿರಂಜೀವಿ ಹೈದರಾಬಾದ್ ನಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಭಾರತ ರತ್ನ ಪುರಸ್ಕಾರಕ್ಕೆ ನಿಜವಾಗಿಯೂ ಅರ್ಹತೆಯುಳ್ಳ ವ್ಯಕ್ತಿ ನರಸಿಂಹರಾವ್. ಅವರನ್ನು ಗೌರವಿಸಲು, ಆತ್ಮಾವಲೋಕನ ಮಾಡಿಕೊಳ್ಳಲು ಇದೇ ಸೂಕ್ತ ಕಾಲ. ಪ್ರಜಾರಾಜ್ಯಂ ಪಕ್ಷ ಮತ್ತು ನನ್ನ ಪರವಾಗಿ ನರಸಿಂಹ ರಾವ್ ಅವರಿಗೆ ನ್ಯಾಯಯುತವಾಗಿ ಭಾರತ ರತ್ನ ನೀಡಬೇಕು ಎಂದು ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದರು.
(ಏಜೆನ್ಸೀಸ್)
Comments
Story first published: Monday, June 29, 2009, 11:06 [IST]