ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಾಮರಾಜನಗರ:ಬಿ ಡಿ ಜತ್ತಿ ಕವನ ಸಂಕಲನ ಸ್ಪರ್ಧೆ

By Staff
|
Google Oneindia Kannada News

ಚಾಮರಾಜನಗರ, ಜೂ. 25 : ಬೈಲಹೊಂಗಲದ ಕನ್ನಡಶ್ರೀ ಪ್ರಕಾಶನವು ಮಾಜಿ ಹಂಗಾಮಿ ರಾಷ್ಟ್ರಪತಿ ಡಾ: ಬಿ.ಡಿ.ಜತ್ತಿ ಅವರ ಜಯಂತಿ ನಿಮಿತ್ತವಾಗಿ ರಾಜ್ಯ ಮಟ್ಟದ ಕವನ ಸಂಕಲನವನ್ನು ರೂಪಿಸಿ ಹೊರತರಲು ನಿರ್ಧರಿಸಿದೆ.

ಡಾ : ಬಿ.ಡಿ.ಜತ್ತಿ ಅವರ ಜೀವನ, ಸಾಧನೆ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಧಾರ್ಮಿಕ, ಆಡಳಿತಾತ್ಮಕ, ವಚನ ಸಾಹಿತ್ಯಕ್ಕೆ, ಕರ್ನಾಟಕಕ್ಕೆ ಅವರು ನೀಡಿರುವ ಕೊಡುಗೆಯ ಬಗ್ಗೆ ಉದಯೋನ್ಮುಖ ಹಾಗೂ ಪ್ರತಿಭಾವಂತ ಕವಿಗಳಿಂದ ಕವನಗಳನ್ನು ಆಹ್ವಾನಿಸಲಾಗಿದೆ. ಆಯ್ಕೆಯಾದ ಕವನಗಳನ್ನು ಸಂಕಲನ ರೂಪದಲ್ಲಿ ಪ್ರಕಟಿಸಲಾಗುವುದು ಮತ್ತು ಬೆಳಗಾವಿ ನಗರದಲ್ಲಿ ರಾಜ್ಯ ಮಟ್ಟದ ಕವಿಗೋಷ್ಠಿ ಏರ್ಪಡಿಸಿ ಕವನ ಸಂಕಲನವನ್ನು ಲೋಕಾರ್ಪಣೆ ಮಾಡಲಾಗುವುದು.

ಕವನ 30 ಸಾಲುಗಳಿಗೆ ಮಿಕ್ಕದಂತೆ ಕಾಗದದ ಒಂದೇ ಮಗ್ಗುಲಲ್ಲಿ ಬರೆದು ಅಥವಾ ಡಿ.ಟಿ.ಪಿ. ಮಾಡಿಸಿ, ಸ್ವವಿಳಾಸ, ಕಿರಿ ಪರಿಚಯ, ಭಾವಚಿತ್ರದೊಂದಿಗೆ 2009 ರ ಜುಲೈ 20ರೊಳಗೆ ಡಾ.ಪ್ರಕಾಶ ಗ.ಖಾಡೆ, ಪ್ಲಾಟ್ ನಂ.19, ಸೆಕ್ಟರ್ ನಂ.3, ಜಿಲ್ಲಾ ಆಸ್ಪತ್ರೆ ಹತ್ತಿರ, ನವನಗರ, ಬಾಗಲಕೋಟೆ-587103 ವಿಳಾಸಕ್ಕೆ ಕಳಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಮೊಬೈಲ್ 9845500891 ಸಂಪರ್ಕಿಸಬೇಕೆಂದು ಬೆಳಗಾವಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಮೋಹನ ಬಸನಗೌಡ ಪಾಟೀಲ ತಿಳಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X