ವಿರಾಜಪೇಟೆಯಲ್ಲಿ ಅಡ್ವಾಣಿ ವಿಶ್ರಾಂತಿ
ವಿರಾಜಪೇಟೆ, ಜೂ. 23 : ಪಕ್ಷದ ದಾರುಣ ಸೋಲು ಮತ್ತು ಬಿಜೆಪಿಯಲ್ಲಿ ಎದ್ದಿರುವ ಆಂತರಿಕ ಬಂಡಾಯದಿಂದ ತೀವ್ರವಾಗಿ ಬೇಸತ್ತಿರುವ ಬಿಜೆಪಿ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರು ವಿಶ್ರಾಂತಿಗಾಗಿ ಕುಟುಂಬ ಸಮೇತ ರಾಜ್ಯಕ್ಕೆ ಐದು ದಿನಗಳ ಕಾಲ ಖಾಸಗಿ ಭೇಟಿ ನೀಡಿದ್ದಾರೆ. ಕರ್ನಾಟಕದ ಕಾಶ್ಮೀರ ಕೊಡಗಿನ ವಿರಾಜ ಪೇಟೆಯ ಆರೆಂಜ್ ಕಂಟ್ರಿ ರಿಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ.
ಈ ಮಧ್ಯೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅಡ್ವಾಣಿ, ಲೋಕಸಭೆ ಚುನಾವಣೆಯಲ್ಲಿ ಮಾಡಿದ ಪ್ರವಾಸದಿಂದ ಆಯಾಸ ಉಂಟಾಗಿದೆ. ವಿಶ್ರಾಂತಿಗಾಗಿ ಕರ್ನಾಟಕಕ್ಕೆ ಬಂದಿರುವೆ. ಐದು ದಿನಗಳ ಕಾಲ ಇಲ್ಲಿನ ರಿಸಾರ್ಟ್ ವೊಂದರಲ್ಲಿ ತಂಗುವೆ. ಈ ಐದು ದಿನಗಳ ಕಾಲ ರಾಜಕೀಯದಿಂದ ದೂರ ಇರುವೆ ಎಂದು ಅವರು ಹೇಳಿದರು. ಮಂಗಳವಾರ ಮಧ್ಯಾಹ್ನ ಸುಮಾರು 2 ಗಂಟೆಯ ಹೊತ್ತಿಗೆ ವಿರಾಜ್ ಪೇಟೆಯ ಸರಕಾರಿ ಪಿಯು ಕಾಲೇಜಿನ ಮೈದಾನದಲ್ಲಿ ಖಾಸಗಿ ಹೆಲಿಕ್ಯಾಪ್ಟರ್ ಮೂಲಕ ಅಡ್ವಾಣಿ ಬಂದಿಳಿದರು. ಅವರ ಜೊತೆಗೆ ಅವರ ಪತ್ನಿ ಮತ್ತು ಮಗಳು ಜೊತೆಗಿದ್ದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications