ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಸೋಲಿನ ಹೊಣೆ ಹೊತ್ತ ರಾಜನಾಥ್ ಸಿಂಗ್

By Staff
|
Google Oneindia Kannada News

Rajnath Singh
ನವದೆಹಲಿ, ಜೂ.20: ಈ ಬಾರಿಯ ಲೋಕಸಭೆ ಚುನಾವಣೆಯ ಸೋಲಿನ ಹೊಣೆಯನ್ನು ತಾನೇ ಹೊರುತ್ತೇನೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜ್ ನಾಥ್ ಸಿಂಗ್ ಶನಿವಾರ ನವದೆಹಲಿಯಲ್ಲಿ ಹೇಳಿದರು. ಆದರೆ ಯಾವುದೇ ಕಾರಣಕ್ಕೂ ಹಿಂದುತ್ವ ಸಿದ್ಧಾಂತವನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಅವರು ಬಿಜೆಪಿ ಕಾರ್ಯಕಾರಿಣಿಯಲ್ಲಿ ಸ್ಪಷ್ಟಪಡಿಸಿದರು.

ನವದೆಹಲಿಯಲ್ಲಿ ಬಿಜೆಪಿ ಕಾರ್ಯಕಾರಿಣಿಯಲ್ಲಿ ಮಾತನಾಡುತ್ತಿದ್ದ ರಾಜ್ ನಾಥ್ ಸಿಂಗ್, ಫಲಿತಾಂಶ ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿದೆ ಹಾಗಾಗಿ ಇದನ್ನು ನಾವು ರಾಷ್ಟ್ರೀಯ ಸೋಲು ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಸೋಲಿನ ಹೊಣೆಯನ್ನು ಒಬ್ಬವ್ಯಕ್ತಿಯ ಮೇಲೆ ಹೊರಿಸುವುದು ಸರಿಯಲ್ಲ. ಸೋಲಿನ ಪರಾಮರ್ಶೆಯನ್ನು ನಡೆಸುತ್ತೇವೆ. ಸಾಮೂಹಿಕ ಸೋಲು ಮತ್ತು ಸಾಮೂಹಿಕ ಗೆಲುವಿನಲ್ಲಿ ಬಿಜೆಪಿ ನಂಬಿಕೆ ಇಟ್ಟಿದೆ ಎಂದರು.

ಒಂದು ವೇಳೆ ಬಿಜೆಪಿ ಸೋಲನ್ನು ಒಬ್ಬರ ಮೇಲೆ ಹೊರಿಸುವಂತಿದ್ದರೆ ಆ ಹೊಣೆಯನ್ನು ನಾನೇ ಹೊರುತ್ತೇನೆ ಎಂದರು. ಸೋಲಿನ ಪರಾಮರ್ಶೆ ನಡೆಸಲು ಬಿಜೆಪಿಯ ಮೊದಲ ಸಮಾವೇಶ ಇದಾಗಿದೆ. ಎರಡು ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿಯನ್ನು ಇಂದು ಉದ್ಘಾಟಿಸಲಾಯಿತು.

ಈ ಸಂದರ್ಭದಲ್ಲಿ ಚುನಾವಣೆಯಲ್ಲಿ ಪಕ್ಷದ ವೈಫಲ್ಯಗಳ ಮೇಲೆ ನಾಯಕರಲ್ಲಿನ ಅಸಂತೃಪ್ತಿ, ಒಬ್ಬರ ಮೇಲೆ ಒಬ್ಬರು ಆರೋಪಿಸುತ್ತಿರುವ ಇನ್ನಿತರೆ ಅಂಶಗಳು ಚರ್ಚೆಗೆ ಬಂದವು. ಅರುಣ್ ಜೇಟ್ಲಿ, ಯಶ್ವಂತ್ ಸಿನ್ಹಾ ಮತ್ತು ವಸುಂಧರಾರಾಜೆ ಕಾರ್ಯಕಾರಿಣಿಗೆ ಗೈರು ಹಾಜರಾಗಿದ್ದರು.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X