ಒಬ್ಬ ಡಕಾಯಿತನನ್ನು ಹಿಡಿಯಲು 400 ಪೋಲಿಸ್ !!
ಚಿತ್ರಕೂಟ (ಉ.ಪ್ರ), ಜೂ. 18 : 400 ಜನ ಉತ್ತರಪ್ರದೇಶದ ಪೋಲೀಸರ 52 ಘಂಟೆಗಳ ಅವಿರತ ಪ್ರಯತ್ನದಿಂದ ಒಬ್ಬ ಅಂತರರಾಜ್ಯ ಡಕಾಯಿತನೊಬ್ಬನನ್ನು ಚಿತ್ರಕೂಟದ ಬಳಿ ಹೊಡೆದುರುಳಿಸಿ ಸಾಹಸ ಮೆರೆದಿದ್ದಾರೆ. ಹಾಗೇ ಬಲಿಯಾಗುವ ಮುಂಚೆ 4 ಜನ ಪೋಲೀಸರನ್ನು ಕೊಂದಿದ್ದಾನೆ.
ಘನಶ್ಯಾಮ ಕೇವಟ ಎನ್ನುವ ಈ ಡಕಾಯಿತನ ತಲೆಗೆ ಉತ್ತರಪ್ರದೇಶ ಸರಕಾರ 50 ಸಾವಿರ ರುಪಾಯಿ ಬಹುಮಾನ ಘೋಷಿಸಿತ್ತು. ಉತ್ತರಪ್ರದೇಶ ಮತ್ತು ಮಧ್ಯಪ್ರದೇಶ ರಾಜ್ಯದ ಗಡಿಭಾಗದಲ್ಲಿರುವ ಸುಮಾರು 40 ಮನೆಗಳನ್ನು ಹೊಂದಿರುವ ಜಾಮೌಲಿ ಗ್ರಾಮದಲ್ಲಿ ಘನಶ್ಯಾಮ ಅಡಗಿಕೊಂಡಿದ್ದ. ಗ್ರಾಮದಲ್ಲಿ ನೆಲೆಸಿದ್ದವರನ್ನು ತೆರವುಗೊಳಿಸಿದ ಪೊಲೀಸರು ಮನೆಗಳಿಗೆ ಬೆಂಕಿ ಹಚ್ಚಿ ಡಕಾಯಿತನನ್ನು ಉಸಿರುಗಟ್ಟಲು ಯತ್ನಿಸಿದ್ದರು. ಆದರೆ ಆತ ಅಡಗಿದ್ದ ಮನೆಯ ಸಮೀಪ ತೆರಳಲು ಪೊಲೀಸರು ಯತ್ನಿಸಿದ ವೇಳೆ ಘನಶ್ಯಾಮ ಗುಂಡಿನ ದಾಳಿ ನಡೆಸಿದ.
ಬೆಳಗಿನ ಜಾವ ಈ ಡಕಾಯಿತ ತಪ್ಪಿಸಿಕೊಳ್ಳಲು ಯತ್ನಿಸಿ ಎದುರಿಗೆ ಬಂದ ಪೊಲೀಸರಿಗೆ ಯದ್ವಾತದ್ವಾ ಗುಂಡು ಹಾರಿಸಿ ನಾಲ್ಕು ಜನ ಪೋಲೀಸರ ಸಾವಿಗೆ ಕಾರಣನಾದ. ಆಗ ಪೊಲೀಸರು ಇಡೀ ಗ್ರಾಮವನ್ನು ಸುತ್ತುವರಿದು ಪ್ರತಿಯಾಗಿ ಗುಂಡು ಹಾರಿಸಿ ಡಕಾಯಿತನನ್ನು ಕೊನೆಗೂ ಹೊಡೆದುರುಳಿಸಿ ನಿಟ್ಟುಸಿರು ಬಿಟ್ಟಿದ್ದಾರೆ.
(ಏಜನ್ಸೀಸ್)
-
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್












Click it and Unblock the Notifications