ಮೈಸೂರು : ದೂರವಾಣಿ ಕೋಡ್ ಬದಲಾವಣೆ
ಮೈಸೂರು, ಜೂ. 11 : ದೂರವಾಣಿ ಇಲಾಖೆಯ ಆದೇಶದನ್ವಯ ಭಾರತ ಸಂಚಾರ ನಿಗಮವು ನಿರ್ಧರಿಸಿದಂತೆ ರಾಜ್ಯದ ಒಳಕರೆಯ ವ್ಯಾಪ್ತಿಯಲ್ಲಿ '95' ಕೋಡ್ ಬಳಸಿ ಕರೆ ಮಾಡುವ ವ್ಯವಸ್ಥೆಯನ್ನು ತಾಂತ್ರಿಕ ಕಾರಣಗಳಿಗಾಗಿ ಜೂನ್ 18 ರ ಮಧ್ಯರಾತ್ರಿಯಿಂದ ಜಾರಿಯಾಗುವಂತೆ ಬದಲಿ ವ್ಯವಸ್ಥೆಗೆ ಮರು ಪರಿವರ್ತಿಸಲಾಗುವುದು. ಈ ಹೊಸ ಬದಲಿ ವ್ಯವಸ್ಥೆಯಂತೆ ಜೂನ್ 18ರ ಮಧ್ಯರಾತ್ರಿಯಿಂದಲೇ ಜಾರಿಯಾಗುವಂತೆ ಬಿಎಸ್ಎನ್ಎಲ್.ನ ಎಲ್ಲ ಸ್ಥಿರ ಮತ್ತು ವಿಲ್ ದೂರವಾಣಿ ಹಾಗೂ ಎಸ್ಟಿಡಿ ಪಿಟಿ ಹಾಗೂ ಸಿಸಿಬಿ ಪಿಟಿ.ಗಳಿಂದ '95' ಕೋಡ್ ಬದಲು '0' ಕೋಡ್ ಉಪಯೋಗಿಸಿ ಬೇಕಾದ ನಂಬರ್ಗಳನ್ನು ಡಯಲ್ ಮಾಡಬೇಕಾಗುತ್ತದೆ.
ಈ ಹೊಸ ವ್ಯವಸ್ಥೆ ಜಾರಿಯಾದಂದಿನಿಂದ ಎಲ್ಲಾ ಗ್ರಾಹಕರಿಗೂ '0' ಕೋಡ್ ಉಪಯೋಗಿಸುವ ಸೇವೆ ಒದಗಿಸಿ ಅದರ ನಿರ್ವಹಣೆಗಾಗಿ 'ಡೈನಾಮಿಕ್ ಲಾಕ್' ವ್ಯವಸ್ಥೆ ಕಲ್ಪಿಸಲಾಗುತ್ತದೆ. ಈ ಕರೆ ದರದ ಬದಲಾವಣೆ ಸಾರ್ವಜನಿಕ ದೂರವಾಣಿಗೆ ಅನ್ವಯಿಸುವುದಿಲ್ಲ. ಆದರೆ '0' ಕೋಡ್ ಬಳಸಿ ಸಾರ್ವಜನಿಕ ದೂರವಾಣಿಗಳಿಂದ ಕರೆ ಮಾಡುವ ಸೌಲಭ್ಯವು ಇರುವುದರಿಂದ, ಸಾರ್ವಜನಿಕ ದೂರವಾಣಿ ನಿರ್ವಾಹಕರು 50 ಕಿ.ಮೀ. ದೂರದವರೆಗೆ ಹಾಗೂ 50 ಕಿ.ಮೀ. ನಂತರದ ರಾಜ್ಯ ವ್ಯಾಪ್ತಿ ಕರೆಗಳಿಗೆ ಅನುಕ್ರಮವಾಗಿ 90 ಸೆಕೆಂಡ್ ಹಾಗೂ 60 ಸೆಕೆಂಡ್ ಮತ್ತು ಅಂತರ ರಾಜ್ಯ ಕರೆಗಳಿಗೆ 60 ಸೆಕೆಂಡ್ ಕರೆ ದರದ ತಾಂತ್ರಿಕ ಬದಲಾವಣೆಗಳನ್ನು ತಮ್ಮ ಪಿ.ಸಿ.ಓ. ಯಂತ್ರಗಳಲ್ಲಿ ಕೋಡಲೇ ಅಳವಡಿಸಬೇಕಾಗಿ ಈ ಮೂಲಕ ಮಾಹಿತಿ ನೀಡಲಾಗಿದೆ.
ದೂರ ಹಾಗೂ ದರದ ಮಾಹಿತಿಗಾಗಿ ಮತ್ತು ಯಾವುದೇ ತೊಂದರೆಗಳಿದ್ದಲ್ಲಿ ನಿಮ್ಮ ಹತ್ತಿರದ ಗ್ರಾಹಕ ಸೇವಾ ಕೇಂದ್ರ, ವಾಣಿಜ್ಯಾಧಿಕಾರಿ ಅಥವಾ ಉಪ ಮಂಡಲಾಧಿಕಾರಿಯವರ ಕಚೇರಿಯನ್ನು ಸಂಪರ್ಕಿಸಬೇಕೆಂದು ಕೋರಲಾಗಿದೆ.
(ದಟ್ಸ್ ಕನ್ನಡ ವಾರ್ತೆ)
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications