ಹಿಂದುತ್ವ ಜೀವನಕ್ರಮವಾಗಬೇಕು, ಭಾಗವತ್

ಆರ್ಎಸ್ಎಸ್ ಮುಖ್ಯ ಕಚೇರಿಯಲ್ಲಿ ಒಂದು ತಿಂಗಳ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಮತಾಂತರ ಒಂದು ಶಾಪ. ಭಾರತದಲ್ಲಿ ಧರ್ಮ ಬದಲಾವಣೆ ಮಾಡುತ್ತಿರುವ ಪ್ರಕ್ರಿಯೆ ಅವ್ಯಾಹತವಾಗಿ ಮುಂದುವರೆಯತೊಡಗಿದೆ. ಇದನ್ನು ತಡೆಗಟ್ಟಬೇಕು. ಈ ನಿಟ್ಟಿನಲ್ಲಿ ಸರಕಾರ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಭಯೋತ್ಪಾದನೆ ಮತ್ತು ಬಡತನ ಆ ಎರಡು ಸಮಸ್ಯೆಗಳು ಕೂಡಾ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಭಯೋತ್ಪಾದನೆಯಿಂದ ದೇಶದಲ್ಲಿ ಅಶಾಂತಿ ಉಂಟಾಗಿದೆ. ಬಡತನದಿಂದ ಅಸಮಾನತೆ ಹೆಚ್ಚಾಗತೊಡಗಿದೆ. ಈ ಸಮಸ್ಯೆಗಳನ್ನು ಶೀಘ್ರದಲ್ಲಿ ಹೋಗಲಾಡಿಸಿದರೆ, ಮಾತ್ರ ದೇಶಕ್ಕೆ ಉಜ್ಲವ ಭವಿಷ್ಯವಿದೆ. ರಾಜಕೀಯ ನೇತಾರರು ಸಮಾಜವನ್ನು ಎತ್ತಿಕಟ್ಟುವುದನ್ನು ನಿಲ್ಲಿಸಿ, ದೇಶ ಕಟ್ಟುವ ಕೆಲಸ ಮಾಡಬೇಕಿದೆ. ಆ ಮೂಲಕ ದೇಶದ ಏಕತೆ, ಸಮಗ್ರತೆ ಕಾಪಾಡಬೇಕಿದೆ ಎಂದು ಭಾಗವತ್ ಹೇಳಿದರು.
(ಏಜನ್ಸೀಸ್)












Click it and Unblock the Notifications