ಹಿಂದುತ್ವ ಜೀವನಕ್ರಮವಾಗಬೇಕು, ಭಾಗವತ್

Mohan Bhagwath
ನಾಗ್ಪುರ್, ಜೂ. 9 : ಹಿಂದುತ್ವದ ಅನ್ನುವುದು ಧರ್ಮವಲ್ಲ. ಅದೊಂದು ಜೀವನಕ್ರಮ. ಪ್ರತಿಯೊಂದು ಧರ್ಮಕ್ಕೂ ಅದರದೆ ಆದ ತತ್ವ ಸಿದ್ಧಾಂತಗಳಿವೆ. ಧರ್ಮಗಳ ಧರ್ಮಗಳ ನಡುವೆ ಸಂಘರ್ಷ ಸರಿಯಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅಭಿಪ್ರಾಯಪಟ್ಟರು.

ಆರ್ಎಸ್ಎಸ್ ಮುಖ್ಯ ಕಚೇರಿಯಲ್ಲಿ ಒಂದು ತಿಂಗಳ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಮತಾಂತರ ಒಂದು ಶಾಪ. ಭಾರತದಲ್ಲಿ ಧರ್ಮ ಬದಲಾವಣೆ ಮಾಡುತ್ತಿರುವ ಪ್ರಕ್ರಿಯೆ ಅವ್ಯಾಹತವಾಗಿ ಮುಂದುವರೆಯತೊಡಗಿದೆ. ಇದನ್ನು ತಡೆಗಟ್ಟಬೇಕು. ಈ ನಿಟ್ಟಿನಲ್ಲಿ ಸರಕಾರ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಭಯೋತ್ಪಾದನೆ ಮತ್ತು ಬಡತನ ಆ ಎರಡು ಸಮಸ್ಯೆಗಳು ಕೂಡಾ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಭಯೋತ್ಪಾದನೆಯಿಂದ ದೇಶದಲ್ಲಿ ಅಶಾಂತಿ ಉಂಟಾಗಿದೆ. ಬಡತನದಿಂದ ಅಸಮಾನತೆ ಹೆಚ್ಚಾಗತೊಡಗಿದೆ. ಈ ಸಮಸ್ಯೆಗಳನ್ನು ಶೀಘ್ರದಲ್ಲಿ ಹೋಗಲಾಡಿಸಿದರೆ, ಮಾತ್ರ ದೇಶಕ್ಕೆ ಉಜ್ಲವ ಭವಿಷ್ಯವಿದೆ. ರಾಜಕೀಯ ನೇತಾರರು ಸಮಾಜವನ್ನು ಎತ್ತಿಕಟ್ಟುವುದನ್ನು ನಿಲ್ಲಿಸಿ, ದೇಶ ಕಟ್ಟುವ ಕೆಲಸ ಮಾಡಬೇಕಿದೆ. ಆ ಮೂಲಕ ದೇಶದ ಏಕತೆ, ಸಮಗ್ರತೆ ಕಾಪಾಡಬೇಕಿದೆ ಎಂದು ಭಾಗವತ್ ಹೇಳಿದರು.

(ಏಜನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+